ADVERTISEMENT

‘ಹಾಲ್‌ ಟಿಕೆಟ್‌’ ತಡೆಗೆ ಅವಕಾಶವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:27 IST
Last Updated 26 ಫೆಬ್ರುವರಿ 2018, 19:27 IST
‘ಹಾಲ್‌ ಟಿಕೆಟ್‌’ ತಡೆಗೆ ಅವಕಾಶವೇ ಇಲ್ಲ
‘ಹಾಲ್‌ ಟಿಕೆಟ್‌’ ತಡೆಗೆ ಅವಕಾಶವೇ ಇಲ್ಲ   

ನವದೆಹಲಿ: ಹತ್ತು ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಪ್ರವೇಶ ಪತ್ರ ತಡೆ ಹಿಡಿಯದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಶಾಲಾ ಮುಖ್ಯಸ್ಥರಿಗೆ ಸೂಚಿಸಿದೆ.

ಪೂರ್ವ ತಯಾರಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿಲ್ಲ ಎಂಬ ನೆಪವೊಡ್ಡಿ ಪರೀಕ್ಷಾ ಪ್ರವೇಶ ಪತ್ರ ತಡೆ ಹಿಡಿಯುವ ಹಲವು ಪ್ರಕರಣಗಳು ವರದಿಯಾಗಿವೆ. ಕೆಲವು ಶಾಲೆಗಳು ಪ್ರವೇಶ ಪತ್ರ ನೀಡಲು  ಹಣ ನೀಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಪೀಡಿಸುತ್ತಿವೆ ಎಂಬ ದೂರು ಕೇಳಿ ಬಂದ ಕಾರಣ ಮಂಡಳಿಯು ಎಲ್ಲ ಸಿಬಿಎಸ್‌ಇ ಶಾಲೆಗಳಿಗೆ ಈ ಸೂಚನೆ ನೀಡಿದೆ.

ಯಾವುದೇ ಕಾರಣ ನೀಡಿ ಶಾಲೆಗಳು ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರ ತಡೆ ಹಿಡಿಯುವಂತಿಲ್ಲ. ಒಂದು ವೇಳೆ ತಡೆ ಹಿಡಿದದ್ದು ಕಂಡು ಬಂದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಬಿಎಸ್ಇ ಎಚ್ಚರಿಕೆ ನೀಡಿದೆ.

ADVERTISEMENT

ಶಾಲೆಗಳು ಕಳುಹಿಸುವ ಅಂತಿಮ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಸಿಬಿಎಸ್‌ಇಯಿಂದ ಪ್ರವೇಶ ಪತ್ರ ನೀಡಲಾಗುತ್ತದೆ. ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂಬುದು ಆಗಲೇ ದೃಢವಾಗಿರುತ್ತದೆ. ಹಾಗಾಗಿ ಸಿಬಿಎಸ್‌ಇಯಿಂದ ಪ್ರವೇಶ ಪತ್ರ ನೀಡಿದ ಬಳಿಕ ಅದನ್ನು ತಡೆ ಹಿಡಿಯಲು ಅವಕಾಶ ಇಲ್ಲ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಕೆ.ಕೆ. ಚೌಧರಿ ಹೇಳಿದ್ದಾರೆ.

ಮಾರ್ಚ್ 5ರಂದು ಸಿಬಿಎಸ್‌ಇ ಪಠ್ಯಕ್ರಮದ 10 ಮತ್ತು 12ನೇ ತರಗತಿ ಪರೀಕ್ಷೆ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.