ADVERTISEMENT

‘ಸಂಬಂಧಕ್ಕೆ ಧಕ್ಕೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ‘ದೇವಯಾನಿ ಪ್ರಕರಣವು ಭಾರತ ಮತ್ತು ಅಮೆರಿಕ ನಡುವಣ  ವಾಣಿಜ್ಯ ಸಂಬಂಧಕ್ಕೆ  ಧಕ್ಕೆ ತರುವುದಿಲ್ಲ’ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಆನಂದ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

‘ಈ ಪ್ರಕರಣ ಖಂಡನೀಯ. ಇದೇ ವೇಳೆ  ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಕೂಡ ಅಮೂಲ್ಯವಾದುದು. ಇದು ವಿಶ್ವದ ಎರಡು ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಮಹತ್ವದ ಪಾಲುದಾರಿಕೆಯಾಗಿದೆ. ಈ ಬಾಂಧವ್ಯ ಗಟ್ಟಿಯಾಗಿಯೇ ಮುಂದುವರಿಯುತ್ತದೆ’ ಎಂದು  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.