ADVERTISEMENT

ಛತ್ತೀಸಗಢ: 16 ನಕ್ಸಲರ ಶರಣಾಗತಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 12:31 IST
Last Updated 2 ಜೂನ್ 2025, 12:31 IST
   

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 16 ನಕ್ಸಲರು ಸೋಮವಾರ ಪೊಲೀಸರಿಗೆ ಶರಣಾಗಿದ್ದಾರೆ. 

ಶರಣಾಗತಿ ಹೊಂದಿದ ನಕ್ಸಲರಲ್ಲಿ 6 ಮಂದಿಯ ಸುಳಿವು ಕೊಟ್ಟವರಿಗೆ ಒಟ್ಟು 25 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಒಂಬತ್ತು ನಕ್ಸಲರು ಕೆರ್ಲಪೆಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಅವರ ಶರಣಾಗತಿಯ ಮೂಲಕ ಗ್ರಾಮವು ನಕ್ಸಲ್ ಮುಕ್ತವಾಗಿದೆ. ಸರ್ಕಾರದ ₹1 ಕೋಟಿ ಅನುದಾನ ಪಡೆಯಲು ಅರ್ಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನಕ್ಸಲ್‌ ಸಿದ್ಧಾಂತ ಮತ್ತು ಹಿಂಸಾಚಾರಗಳಿಂದ ಬೇಸತ್ತು ಹಾಗೂ ಸರ್ಕಾರದ ಯೋಜನೆಗಳಿಂದ ಮನಪರಿವರ್ತನೆಗೊಂಡು 16 ಮಂದಿ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.