ADVERTISEMENT

ಸಿಖ್‌ ವಿರೋಧಿ ದಂಗೆ: ಆ.5ರಂದು ಕೋರ್ಟ್‌ಗೆ ಹಾಜರಾಗುವಂತೆ ಟೈಟ್ಲರ್‌ಗೆ ಸಮನ್ಸ್‌

ಪಿಟಿಐ
Published 26 ಜುಲೈ 2023, 12:46 IST
Last Updated 26 ಜುಲೈ 2023, 12:46 IST
ಜಗದೀಶ್‌ ಟೈಟ್ಲರ್‌
ಜಗದೀಶ್‌ ಟೈಟ್ಲರ್‌   

ನವದೆಹಲಿ: 1984ರಲ್ಲಿ ನಡೆದಿದ್ದ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಆಗಸ್ಟ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ಅವರಿಗೆ ದೆಹಲಿ ಕೋರ್ಟ್ ಬುಧವಾರ ಸಮನ್ಸ್‌ ಜಾರಿಮಾಡಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಧಿ ಗುಪ್ತಾ ಆನಂದ್ ಅವರು ಪ್ರಕರಣದ ಚಾರ್ಜ್ ಶೀಟ್ ಪರಿಶೀಲಿಸಿದ ನಂತರ ಈ ಆದೇಶ ನೀಡಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಮರು ದಿನ (1984ರ ನವೆಂಬರ್‌ 1) ನಡೆದಿದ್ದ ದಂಗೆಯಲ್ಲಿ ಮೂವರು ಸಾವಿಗೀಡಾಗಿದ್ದರು. ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. ಟೈಟ್ಲರ್‌ ಅವರು ಪುಲ್‌ ಭಂಗಶ್‌ ಗುರುದ್ವಾರದ ಆಜಾದ್‌ ಮಾರುಕಟ್ಟೆ ಬಳಿ ಸೇರಿದ್ದ ಜನರನ್ನು ಪ್ರಚೋದಿಸಿದ್ದರು. ಗಲಭೆ ನಡೆಸುವಂತೆ ಅವರಿಗೆ ಕುಮ್ಮಕ್ಕು ನೀಡಿದ್ದರು. ಹೀಗಾಗಿಯೇ ದುಷ್ಕರ್ಮಿಗಳು ಗುರುದ್ವಾರಕ್ಕೆ ಬೆಂಕಿ ಹಚ್ಚಿದ್ದರು. ಸಿಖ್‌ ಸಮುದಾಯಕ್ಕೆ ಸೇರಿದ್ದ ಠಾಕೂರ್‌ ಸಿಂಗ್‌, ಬಾದಲ್‌ ಸಿಂಗ್‌ ಹಾಗೂ ಗುರುಚರಣ್‌ ಸಿಂಗ್‌ ಎಂಬುವರನ್ನು ಹತ್ಯೆ ಮಾಡಲಾಗಿತ್ತು ಎಂದು ಈಗಾಗಲೇ ಟೈಟ್ಲರ್‌ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.