ADVERTISEMENT

ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದು ದಯಾಮರಣ ಕೋರಿದ ಪಂಜಾಬ್‌ ಯುವತಿಯರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 6:36 IST
Last Updated 6 ಜುಲೈ 2019, 6:36 IST
   

ಪಂಜಾಬ್‌: ತಮ್ಮ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣದಿಂದ ಬಜಾವ್‌ ಮಾಡಿ ಎಂದು ಪಂಜಾಬ್‌ನ ಮೋಗಾ ನಗರದ ಇಬ್ಬರು ಯುವತಿಯರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಯುವತಿಯರು ಬರೆದಿರುವ ರಕ್ತದ ಪತ್ರದಲ್ಲಿ, ವಂಚನೆ ಪ್ರಕರಣವೊಂದರಲ್ಲಿ ಮೋಸದಿಂದ ತಮ್ಮನ್ನು ಸಿಲುಕಿಸಿದ್ದು, ಭಯದಿಂದ ಜೀವನ ನಡೆಸುತ್ತಿದ್ದೇವೆ. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದರೆ, ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ ಎಂದು ಬೇಡಿಕೊಂಡಿದ್ದಾರೆ.

‘ನಮ್ಮ ಮೇಲೆ ಪಾರಿವಾಳ ಬಾಜಿ (ಕಬೂತರ್‌ಬಾಜಿ) ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನಮ್ಮನ್ನು ಸುಲುಕಿಸಲಾಗಿದೆ ದಯವಿಟ್ಟು ಪ್ರಕರಣವನ್ನು ಸರಿಯಾಗಿ ವಿಚಾರಣೆ ನಡೆಸಿ ಎಂದು ಪೊಲೀಸರಿಗೆ ಅವಲೊತ್ತುಕೊಂಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದುನಿಶಾ ಕೌರ್ ಮತ್ತು ಅಮನ್ ಜೋತ್ ಕೌರ್ ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

ಈ ಇಬ್ಬರು ಯುವತಿಯರ ಆರೋಪಗಳನ್ನು ಮೋಗಾ ಡಿಎಸ್‌ಪಿ ಕುಲ್ಜಿಂದರ್ ಸಿಂಗ್ ನಿರಾಕರಿಸಿದರು. ಆ ಇಬ್ಬರು ಯುವತಿಯರ ಬಗ್ಗೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.