ಮೋರಿಗಾಂವ್(ಅಸ್ಸಾಂ): ಹೈಯರ್ ಸೆಕೆಂಡರಿ ಶಾಲೆಗಾಗಿ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ 2 ಸಾವಿರ ಮಂದಿ ಸದಸ್ಯರು ತಾವು ಮಾರಾಟ ಮಾಡಿದ ಪ್ರತಿ ಲೀಟರ್ ಹಾಲಿಗೆ ಲಭಿಸಿದ ಹಣದಲ್ಲಿ 15 ಪೈಸೆಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಮೋರಿಗಾಂವ್ ಜಿಲ್ಲೆಯ ಸೀತಾಜಖಾಲ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹೀಗೆ ವಿನೂತನ ರೀತಿಯಲ್ಲಿ ಸಂಗ್ರಹಿಸಿದ ₹1ಲಕ್ಷದ ಚೆಕ್ ಅನ್ನು ಸೀತಾಜಖಾಲ ಹೈಯರ್ ಸೆಕೆಂಡರಿ ಶಾಲೆಯ 11 ಮತ್ತು 12ನೇ ತರಗತಿ ನಡೆಸಲು ದೇಣಿಗೆಯಾಗಿ ನೀಡಿದ್ದಾರೆ.
‘ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪ್ರಾಥಮಿಕ ಹಂತದ ಶಾಲೆಯು ಸರ್ಕಾರದ ಅಧೀನದಲ್ಲಿದೆ. ಆದರೆ ಹೈಯರ್ ಸೆಕೆಂಡರಿ ಶಾಲೆಯು ಸರ್ಕಾರದ ಅಧೀನದಲ್ಲಿ ಇಲ್ಲದ ಕಾರಣ ಶಾಲೆ ನಡೆಸಲು ಆರ್ಥಿಕ ಸಮಸ್ಯೆ ಎದುರಾಯಿತು ಈ ಕಾರಣಕ್ಕಾಗಿ ದೇಣಿಗೆ ಸಂಗ್ರಹಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ರಣಜೀಬ್ ಶರ್ಮಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.