ನವದೆಹಲಿ (ಪಿಟಿಐ): ನೈಋತ್ಯ ಮುಂಗಾರು ಮೇ 29 ರಂದು ಕೇರಳ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
‘ಅಂಡಮಾನ್ ಸಮುದ್ರ ಹಾಗೂ ಬಂಗಾಳಕೊಲ್ಲಿಗೆ ಮೇ 23ರಂದೇ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಅಂದಾಜಿ ಗಿಂತ ನಾಲ್ಕು ದಿನ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಐಎಂಡಿ ಹೇಳಿದೆ.
‘ಈ ವರ್ಷ ವಾಡಿಕೆಯಷ್ಟು ಮುಂಗಾರು ಮಳೆ ಆಗಲಿದೆ’ ಎಂದು ಈ ಹಿಂದೆ ಐಎಂಡಿ ತಿಳಿಸಿತ್ತು.
ವರ್ಷ; ಮುಂಗಾರು ಪ್ರವೇಶ ದಿನಾಂಕ, ನಿರೀಕ್ಷಿತ ದಿನಾಂಕ
2013; ಜೂನ್1; ಜೂನ್3
2014; ಜೂನ್6; ಜೂನ್5
2015; ಜೂನ್5; ಮೇ30
2016; ಜೂನ್8; ಜೂನ್7
2017 ಮೇ30; ಮೇ30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.