ADVERTISEMENT

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿಗೆ ಲಸಿಕೆ: 3 ಬಂಧನ

ಏಜೆನ್ಸೀಸ್
Published 12 ಮಾರ್ಚ್ 2020, 10:02 IST
Last Updated 12 ಮಾರ್ಚ್ 2020, 10:02 IST
ಕೊರೊನಾ ಸೋಂಕಿಗೆ ನಕಲಿ ಔಷಧ ಮೂವರ ಬಂಧನ
ಕೊರೊನಾ ಸೋಂಕಿಗೆ ನಕಲಿ ಔಷಧ ಮೂವರ ಬಂಧನ   

ಮಹಾರಾಷ್ಟ್ರ (ಪಿಟಿಐ): ವಿಶ್ವವೆಕೊರೊನಾ ಸೋಂಕಿನಿಂದ ತತ್ತರಿಸಿರುವುದಲ್ಲದೆ, ಈ ಸೋಂಕಿಗೆ ಇನ್ನೂ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಇಂತಹ ಸಮಯದಲ್ಲಿ ಈ ಸೋಂಕಿಗೆ ಲಸಿಕೆತಮ್ಮ ಬಳಿ ಇರುವುದಾಗಿ ಜನರಿಗೆ ಮೋಸ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ರಾಧಾ ರಾಮನಾಥ ಸಾಮ್ಸೆ, ಸೀಮಾ ಕೃಷ್ಣ ಅಂಡಾಳೆ, ಸಂಗೀತ ರಾಜೇಂದ್ರ ಅವ್ಹಾದ್ ಬಂಧಿತರು.

ಇವರುಮಹಾರಾಷ್ಟ್ರದ ಬೀಡ್ ಪ್ರದೇಶದ ಗ್ರಾಮವೊಂದರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಎಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದರು. ಆರೋಪಿಗಳು ಅಂಬಾಡ್ ತಹಶೀಲ್ ಪ್ರದೇಶದ ಪಿಪಲ್ ಗಾಂವ್ ಎಂಬ ಪ್ರದೇಶಕ್ಕೆ ತೆರಳಿ ಕೊರೊನಾ ವೈರಸ್ ತಡೆಗೆ ಲಸಿಕೆತಮ್ಮ ಬಳಿ ಇದೆ ಎಂದು ಮುಗ್ದ ಜನರನ್ನು ನಂಬಿಸುತ್ತಿದ್ದರು.

ADVERTISEMENT

ಇವರನ್ನು ನೋಡಿದ ಕೆಲ ಗ್ರಾಮಸ್ಥರು ಸ್ಥಳೀಯ ವೈದ್ಯಾಧಿಕಾರಿ ಡಾ.ಮಹದೇವ ಮುಂಡೆ ಎಂಬುವರ ಬಳಿ ದೂರು ನೀಡಿದರು. ಕೂಡಲೆ ದಾಳಿ ನಡೆಸಿದ ಅಧಿಕಾರಿಗಳು ನಕಲಿ ಬಾಟಲಿಗಳು ಹಾಗೂ ರಾಜ್ಯ ಸರ್ಕಾರ ನೀಡಿದ್ದ ಕೆಲ ಔಷಧಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.