ADVERTISEMENT

ನವದೆಹಲಿ ಕಾರ್ಖಾನೆಯಲ್ಲಿ ಬೆಂಕಿ; 4 ಮಂದಿ ಸಜೀವ ದಹನ

ಘಟನೆಯ ಕಾರಣ ತಿಳಿದು ಬಂದಿಲ್ಲ

ಏಜೆನ್ಸೀಸ್
Published 19 ನವೆಂಬರ್ 2018, 10:43 IST
Last Updated 19 ನವೆಂಬರ್ 2018, 10:43 IST
   

ನವದೆಹಲಿ: ಇಲ್ಲಿನ ಕರೋಲ್ ಬಾಗ್‌ನ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 4 ಮಂದಿ ಸಜೀವ ದಹನವಾಗಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಬಾಗನ್ ಪ್ರಸಾದ್ (55), ಆರ್‌.ಎಮ್‌ ನರೇಶ್ (40), ಆರತಿ (20) ಮತ್ತು ಆಶಾ (40) ಎಂದು ಗುರುತಿಸಲಾಗಿದೆ. ಗಾಯಗೊಂಡ ಅಜೀತ್ (25) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ದೆಹಲಿಯ ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದರು.

ADVERTISEMENT

ಘಟನೆಯು ಸುಮಾರು 12.30ಕ್ಕೆ ಸಂಭವಿಸಿದೆ. ನಡೆದ ಅರ್ಧಗಂಟೆಯೊಳಗೆ ಬೆಂಕಿ ಹರಡಿದೆ. ಈ ಅನಾಹುತದ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.