ADVERTISEMENT

ದೇಶದಲ್ಲಿ 472 ಕೈದಿಗಳು ಮರಣದಂಡನೆಗೆ ಗುರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 14:42 IST
Last Updated 29 ಮಾರ್ಚ್ 2023, 14:42 IST
   

ನವದೆಹಲಿ (ಪಿಟಿಐ): 2021ರ ಡಿಸೆಂಬರ್‌ 31ರ ಅನ್ವಯ ದೇಶದ ವಿವಿಧ ಜೈಲುಗಳಲ್ಲಿ ಒಟ್ಟು 472 ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದಾರೆ. ಮುಂದಿನ ಕ್ರಮಕ್ಕಾಗಿ ಕಾಯಲಾಗುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಕುಮಾರ್‌ ಮಿಶ್ರ ಅವರು ಬುಧವಾರ ರಾಜ್ಯಸಭೆಗೆ ತಿಳಿಸಿದರು.

290 ಜನರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಿಸಲಾಗಿದೆ ಎಂದರು.

ಮರಣದಂಡನೆಗೆ ಗುರಿಯಾಗಿರುವ ಕೈದಿಗಳಲ್ಲಿ ಅತಿಹೆಚ್ಚಿನ ಸಂಖ್ಯೆಯ ಅಂದರೆ, ಒಟ್ಟು 67 ಕೈದಿಗಳು ಉತ್ತರಪ್ರದೇಶದ ಜೈಲುಗಳಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ (46), ಮಹಾರಾಷ್ಟ್ರ (44), ಮಧ್ಯಪ್ರದೇಶ (39), ಪಶ್ಚಿಮ ಬಂಗಾಳ (37), ಜಾರ್ಖಂಡ್‌ (31) ಮತ್ತು ಕರ್ನಾಟಕ (27) ರಾಜ್ಯಗಳಿವೆ ಎಂದು ಅಜಯ್‌ ಕುಮಾರ್‌ ಲಿಖಿತ ಉತ್ತರದಲ್ಲಿ ತಿಳಿಸಿದರು.

ADVERTISEMENT

ಮರಣದಂಡನೆ ಕಡಿತಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿರುವ 290 ಕೈದಿಗಳ ಪೈಕಿ ಮಧ್ಯಪ್ರದೇಶದಲ್ಲಿ 46 ಕೈದಿಗಳು, ಮಹಾರಾಷ್ಟ್ರ (35), ಉತ್ತರಪ್ರದೇಶ (32), ಬಿಹಾರ (30), ಕರ್ನಾಟಕ (19), ಪಶ್ಚಿಮ ಬಂಗಾಳ (19) ಮತ್ತು ಗುಜರಾತ್‌ (18) ಕೈದಿಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.