ADVERTISEMENT

ದೆಹಲಿಯಲ್ಲಿ ಎನ್‌ಕೌಂಟರ್‌: ಐವರ ಬಂಧನ

ಭಯೋತ್ಪಾದನೆ ಸಂಘಟನೆಗಳ ಜತೆ ಸಂಪರ್ಕದ ಶಂಕೆ

ಪಿಟಿಐ
Published 7 ಡಿಸೆಂಬರ್ 2020, 6:11 IST
Last Updated 7 ಡಿಸೆಂಬರ್ 2020, 6:11 IST
ಎನ್‌ಕೌಂಟರ್‌–ಸಾಂದರ್ಭಿಕ ಚಿತ್ರ
ಎನ್‌ಕೌಂಟರ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ಪೂರ್ವ ದೆಹಲಿಯ ಶಾಕಾರ್ಪುರ್ ಪ್ರದೇಶದಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ ಬಳಿಕ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಕೆಲವರು ಭಯೋತ್ಪಾದನೆ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಶಂಕೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಐವರಲ್ಲಿ ಇಬ್ಬರು ಪಂಜಾಬ್‌ದವರು ಮತ್ತು ಉಳಿದ ಮೂವರು ಕಾಶ್ಮೀರದವರು. ಇವರಿಂದ ಶಸ್ತ್ರಾಸ್ತ್ರಗಳು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನೆ ಸಂಘಟನೆಗಳ ಜತೆ ಹೊಂದಿರುವ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಡಿಸಿಪಿ ಪ್ರಮೋದ್‌ ಸಿಂಗ್‌ ಕುಶ್ವಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT