ADVERTISEMENT

ಮಥುರಾ: ಬಾಂಕೆ ಬಿಹಾರಿ ದೇಗುಲದ ಸಮೀಪ ಕಟ್ಟಡ ಕುಸಿದು 5 ಮಂದಿ ಸಾವು

ಪಿಟಿಐ
Published 16 ಆಗಸ್ಟ್ 2023, 2:33 IST
Last Updated 16 ಆಗಸ್ಟ್ 2023, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಥುರಾ: ಇಲ್ಲಿನ ಬಾಂಕೆ ಬಿಹಾರಿ ದೇವಾಲಯದ ಸಮೀಪ ಹಳೆಯ ಕಟ್ಟಡ ಕುಸಿದು ಐದು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಘಟನೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ದೇವಾಲಯಕ್ಕೆ ಹೋಗುತ್ತಿದ್ದ ಭಕ್ತರ ಮೇಲೆ ಕಟ್ಟಡದ ಭಾಗ ಕುಸಿದು ಬಿದ್ದಿದೆ.

ದುರಂತಕ್ಕೆ ಸಂತಾಪ ಸೂಚಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ.

ADVERTISEMENT

ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಒದಗಿಸುವುದನ್ನು ಖಾತ್ರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೃತರನ್ನು ಕಾನ್ಪುರದ ಗೀತಾ ಕಶ್ಯಪ್ (50), ಅರವಿಂದ್ ಕುಮಾರ್ ಯಾದವ್ (35), ರಶ್ಮಿ ಗುಪ್ತಾ (52), ವೃಂದಾವನದ ಅಂಜು ಮುರುಗನ್ (51) ಮತ್ತು ದೇವರಿಯಾದ ಚಂದನ್ ರಾಯ್ ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.