ADVERTISEMENT

ಬೆಂಗಳೂರಿನ ವಿದ್ಯಾ ಸೇರಿ 52 ಅಂಗವಿಕಲ ಸಾಧಕರಿಗೆ ರಾಷ್ಟ್ರಪ್ರಶಸ್ತಿ

ಪಿಟಿಐ
Published 3 ಡಿಸೆಂಬರ್ 2022, 15:55 IST
Last Updated 3 ಡಿಸೆಂಬರ್ 2022, 15:55 IST
ಸಮಾರಂಭದಲ್ಲಿ ಭಾಗವಹಿಸಿದ್ದ ಅಂಗವಿಕಲ ಸಾಧಕರು ಪದಕಗಳೊಂದಿಗೆ ಸಂಭ್ರಮಿಸಿದರು–ಪಿಟಿಐ ಚಿತ್ರ 
ಸಮಾರಂಭದಲ್ಲಿ ಭಾಗವಹಿಸಿದ್ದ ಅಂಗವಿಕಲ ಸಾಧಕರು ಪದಕಗಳೊಂದಿಗೆ ಸಂಭ್ರಮಿಸಿದರು–ಪಿಟಿಐ ಚಿತ್ರ    

ನವದೆಹಲಿ (ಪಿಟಿಐ): ಬೆಂಗಳೂರಿನ ವೈ.ವಿದ್ಯಾ ಸೇರಿದಂತೆ ಒಟ್ಟು 52 ಮಂದಿ ಅಂಗವಿಕಲ ಸಾಧಕರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಅಂಗವಾಗಿ ಶನಿವಾರ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪದಕ ಪ್ರದಾನ ಮಾಡಿದರು.

ದೃಷ್ಟಿಹೀನತೆಯಿಂದ ಬಳಲುತ್ತಿರುವ29 ವರ್ಷದ ವಿದ್ಯಾ ಅವರು ಬೆಂಗಳೂರಿನ ಐಐಟಿಯಲ್ಲಿ ಡಿಜಿಟಲ್‌ ಸೊಸೈಟಿ ವಿಷಯದಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ್ದಾರೆ. ಅವರು 2017ರಲ್ಲಿ ವಿಷನ್‌ ಎಂಪವರ್ (ವಿಇ) ಎಂಬ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಈ ಟ್ರಸ್ಟ್‌ ಮೂಲಕ ದೃಷ್ಟಿಹೀನತೆ ಸಮಸ್ಯೆ ಎದುರಿಸುತ್ತಿರುವವರಿಗೆ ಶಿಕ್ಷಣ ನೀಡಿ ಅವರನ್ನು ಸಶಕ್ತಗೊಳಿಸುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.