ADVERTISEMENT

ಆಂಧ್ರ ಪ್ರದೇಶ: ಕೊಳದಲ್ಲಿ ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಶವ ಪತ್ತೆ

ಏಜೆನ್ಸೀಸ್
Published 7 ಜನವರಿ 2018, 11:31 IST
Last Updated 7 ಜನವರಿ 2018, 11:31 IST
ಆಂಧ್ರ ಪ್ರದೇಶ: ಕೊಳದಲ್ಲಿ ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಶವ ಪತ್ತೆ
ಆಂಧ್ರ ಪ್ರದೇಶ: ಕೊಳದಲ್ಲಿ ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಶವ ಪತ್ತೆ   

ಎಲೂರು: ಗೋದಾವರಿ ಜಿಲ್ಲೆಯ ಪೆಡವೆಗಿ ಮಂಡಲ್‌ ಪ್ರದೇಶದಲ್ಲಿರುವ ಭೋಗಪುರಂ ಕೊಳದಲ್ಲಿ ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಭಾನುವಾರ ಬೆಳಿಗ್ಗೆ ಕೊಳದಲ್ಲಿ ಒಂದು ಶವ ಕಾಣಿಸಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾವಿಗೀಡಾದವರನ್ನು ಕೋಟಾ ಸಾಯ್‌, ಗುಮ್ಮಿ ಶಿವಶಂಕರ್‌ ಪರಶುರಾಮ್‌, ಜಿ. ವಿಜಯ್‌ಶಂಕರ್‌ ಹಾಗೂ ಕೆ.ಹರಿಕೃಷ್ಣ ರಾಜು ಎಂದು ಗುರುತಿಸಲಾಗಿದೆ.

‘ನಾಲ್ವರೂ ಬಿ ಟೆಕ್‌(ಮೆಕ್ಯಾನಿಕಲ್‌ ಎಂಜಿನಿಯರಿಂಗ್‌)ಪದವಿಯ 3ನೇ ವರ್ಷದ ವಿದ್ಯಾರ್ಥಿಗಳಾಗಿದ್ದು, ಎಲೂರಿನಲ್ಲಿರುವ ರಾಮಚಂದ್ರ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶನಿವಾರ ಸಂಜೆ ಕಾಲೇಜು ಮುಗಿಸಿ ಭೋಗಪುರಂ ಕೊಳದ ಬಳಿ ತೆರಳಿದ್ದರು. ಈಜುವ ವೇಳೆ ಮುಳುಗಿ ಸಾವಿಗೀಡಾಗಿರಬಹುದು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಸದ್ಯ ಶವಗಳನ್ನು ಹೊರತೆಗೆಯಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಬಗ್ಗೆ ಮೃತರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ’ ಎಂದೂ ಪೊಲೀಸರು ಹೇಳಿದ್ದಾರೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.