ADVERTISEMENT

ಪಾಕಿಸ್ತಾನಿ ಸೇನೆಯಿಂದ ಮುಂದುವರಿದ ಗುಂಡಿನ ದಾಳಿ: ಒಬ್ಬ ಯೋಧ ಹುತಾತ್ಮ, 2 ನಾಗರಿಕರು ಸಾವು

ನಾಲ್ವರಿಗೆ ಗಾಯ

ಏಜೆನ್ಸೀಸ್
Published 20 ಜನವರಿ 2018, 8:29 IST
Last Updated 20 ಜನವರಿ 2018, 8:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಪಾಕಿಸ್ತಾನಿ ಪಡೆಯು ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್ ದಾಳಿಯಲ್ಲಿ ಒಬ್ಬ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ.

ಹುತಾತ್ಮ ಯೋಧನನ್ನು ಮನದೀಪ್ ಸಿಂಗ್ (23) ಎಂದು ಗುರುತಿಸಲಾಗಿದೆ. ಪಂಜಾಬಿನ ಸಿಂಗನೂರು ಜಿಲ್ಲೆಯ ಅಲಮ್‌ಪುರ ಗ್ರಾಮದವರು. ಈ ದಾಳಿ ಬೆಳಗ್ಗೆ 8.20 ರಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್‌ಪುರ, ಅಕನೂರಿನಲ್ಲಿಯೂ ದಾಳಿ ನಡೆದಿದ್ದು, ಈ ವೇಳೆ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ, ಒಬ್ಬ ಬಿಎಸ್‌ಎಫ್ ಯೋಧ ಗಾಯಗೊಂಡಿದ್ದಾರೆ.

ADVERTISEMENT

ಪಾಕಿಸ್ತಾನ ಸೇನೆಯು ಚೆನಾಬ್ ನದಿ ತೀರದ ಹಾಗೂ ಆರ್‌ಎಸ್ ಪುರ ಗ್ರಾಮದ ನಾಗರಿಕರನ್ನು ಗುರಿಯಾಗಿಸಿಕೊಂಡು ಇಡೀ ರಾತ್ರಿ ದಾಳಿ ನಡೆಸಿದೆ. ಅಲ್ಲದೇ ಅರ್ನಿಯಾ, ರಾಮಘರ್, ಸಾಂಬಾ ಹಿರಾನಗರ ವಲಯದಲ್ಲಿ ನಸುಕಿನ 5ರವರೆಗೂ ದಾಳಿ ಮುಂದುವರಿದಿತ್ತು ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.