ADVERTISEMENT

ಗುಜರಾತ್‌ ಸರಣಿ ಸ್ಪೋಟದ ರೂವಾರಿ ಅಬ್ದುಲ್‌ ಸುಭಾನ್‌ ಖುರೇಷಿ ಬಂಧನ

ಏಜೆನ್ಸೀಸ್
Published 22 ಜನವರಿ 2018, 10:11 IST
Last Updated 22 ಜನವರಿ 2018, 10:11 IST
ಎಎನ್‌ಐ ಚಿತ್ರ
ಎಎನ್‌ಐ ಚಿತ್ರ   

ನವದೆಹಲಿ: ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಹಾಗೂ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ಬೇಕಾಗಿದ್ದ ಭಯೋತ್ಪಾದಕ ಅಬ್ದುಲ್‌ ಸುಭಾನ್‌ ಖುರೇಷಿಯನ್ನು ಸೋಮವಾರ ಬಂಧಿಸಿರುವುದಾಗಿ ದೆಹಲಿ ಪೊಲೀಸರು ಹೇಳಿದರು.

ಬಂಧನದ ವೇಳೆ ಖುರೇಷಿ ಮತ್ತು ಪೊಲೀಸರ ನಡುವೆ ಕೆಲಕಾಲ ಗುಂಡಿನ ಚಕಮಕಿಯೂ ನಡೆದಿದೆ.

‘2008ರಲ್ಲಿ ಗುಜರಾತ್‌ನಲ್ಲಿ ನಡೆದ ಸರಣಿ ಬಾಂಬ್‌ ಸ್ಪೋಟಗಳಲ್ಲಿ ಬಂಧಿತ ಪ್ರಮುಖ ಪಾತ್ರ ವಹಿಸಿದ್ದ’ ಎಂದು ದೆಹಲಿ ಪೊಲೀಸ್‌ನ(ವಿಶೇಷ ವಿಭಾಗ) ಡಿಸಿಪಿ ಪಿ.ಎಸ್‌.ಕುಶ್ವಾಹ ಹೇಳಿದರು.

ADVERTISEMENT

‘ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಸ್ಥಾಪಕ ಹಾಗೂ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ಭಯೋತ್ಪಾದಕ ಅಬ್ದುಲ್‌ ಸುಭಾನ್‌ ಖುರೇಷಿಯನ್ನು ನಾವು ಬಂಧಿಸಿದ್ದೇವೆ. ಈತ ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ನೇಪಾಳದಲ್ಲಿ ನೆಲೆಸಿದ್ದ. ಸಂಘಟನೆಯನ್ನು ಮತ್ತೆ ಬಲಪಡಿಸಲು ಪ್ರಯತ್ನಿಸುತ್ತಿದ್ದ’ ಎಂದು ಕುಶ್ವಾಹ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.