ADVERTISEMENT

ಶ್ರೀಮಂತ ಸಂಸದರು ವೇತನ ತ್ಯಜಿಸಲಿ: ವರುಣ್‌ ಗಾಂಧಿ

ಏಜೆನ್ಸೀಸ್
Published 29 ಜನವರಿ 2018, 9:56 IST
Last Updated 29 ಜನವರಿ 2018, 9:56 IST
ವರುಣ್‌ ಗಾಂಧಿ
ವರುಣ್‌ ಗಾಂಧಿ   

ನವದೆಹಲಿ: ಪ್ರಸಕ್ತ ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಮಂತ ಸಂಸದರು ಸ್ವಯಂ ಪ್ರೇರಿತರಾಗಿ ವೇತನ ತ್ಯಜಿಸಬೇಕು. ಈ ಬಗ್ಗೆ ತಾವು ಮುಖಂಡತ್ವ ವಹಿಸಬೇಕು ಎಂದು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಸಂಸದ ವರುಣ್‌ ಗಾಂಧಿ ಪತ್ರ ಬರೆದಿದ್ದಾರೆ. 

ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಮಂತ ಸಂಸದರು ವೇತನವನ್ನು ತ್ಯಜಿಸಿ ಹೊಸ ಆಂದೋಲನಕ್ಕೆ ಸ್ವಯಂ ಪ್ರೇರಿತರಾಗಿ ಕೈ ಜೋಡಿಸಬೇಕು ಎಂದು ವರುಣ್ ಮನವಿ ಮಾಡಿದ್ದಾರೆ.

ಸಂಸದರು ತೆಗೆದುಕೊಳ್ಳುವ ಸ್ವಯಂ ಪ್ರೇರಿತ ನಿರ್ಧಾರದಿಂದ ಚುನಾಯಿತ ಪ್ರತಿನಿಧಿಗಳ ಬಗ್ಗೆ ಸಮಾಜದಲ್ಲಿ ಸಕಾರಾತ್ಮಕ ಸಂದೇಶ ರವಾನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.