ನವದೆಹಲಿ: ಭಾರತದ ದೊಡ್ದ ಪ್ರವಾಸಿ ಕೇಂದ್ರವಾದ ತಾಜ್ಮಹಲ್ ಅತಿ ಶೀಘ್ರದಲ್ಲಿ ತೇಜೋ ಮಂದಿರ ಆಗಲಿದೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ವಿನಯ್ ಕಟಿಯಾರ್ ಅವರು ಹೇಳಿದ್ದಾರೆ.
ಆಗ್ರಾದಲ್ಲಿ ಫೆ.18ರಿಂದ 10 ದಿನಗಳ ಕಾಲ ನಡೆಯುವ ತಾಜ್ ಮಹೋತ್ಸವದ ಬಗ್ಗೆ ಮಾತನಾಡುವಾಗ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.
‘ಆಗ್ರಾದಲ್ಲಿ ನಡೆಯುವ ಮಹೋತ್ಸವಕ್ಕೆ ತಾಜ್ ಮಹೋತ್ಸವ ಅಥವಾ ತೇಜೋ ಮಹೋತ್ಸವ ಎಂದು ಎರಡು ರೀತಿಯಿಂದಲೂ ಕರೆಯಬಹುದು. ತಾಜ್ ಮತ್ತು ತೇಜ್ ಪದಗಳ ಮಧ್ಯೆ ಸಾಕಷ್ಟು ವ್ಯತ್ಯಾಸ ಇಲ್ಲ. ಮೊಘಲ್ ದೊರೆ ಔರಂಗಜೇಬ್ನಿಂದಾಗಿ ನಮ್ಮ ತೇಜೋ ಮಂದಿರ ಸ್ಮಶಾನ ಭೂಮಿಯಾಯಿತು. ಹಾಗಾಗಿ ತಾಜ್ ಮಹಲ್ ಅನ್ನು ತೇಜೋ ಮಂದಿರವಾಗಿ ಪರಿವರ್ತಿಸಲಿದ್ದೇವೆ’ ಎಂದು ಹೇಳಿದ್ದಾರೆ.
‘ತಾಜ್ ಮಹಲ್ ಕೇವಲ ಔರಂಗಜೇಬ್ನ ಕಾಲಾವಧಿಯನ್ನು ಮಾತ್ರ ನೆನಪಿಸುವುದಿಲ್ಲ. ಇದು ನಮ್ಮ ದೇವಾಲಯ. ಇದರ ಹೆಸರಿನಲ್ಲಿ ಮಹೋತ್ಸವ ನಡೆಸುವುದು ಒಳ್ಳೆಯ ವಿಚಾರ’ ಎಂದಿದ್ದಾರೆ.
ಈ ಹಿಂದೆ ವಿನಯ್ ಕಟಿಯಾರ್ ಅವರು ತಾಜ್ ಮಹಲ್ ನಮ್ಮ ಶಿವ ದೇವಾಲಯ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.