ಡೆಹ್ರಾಡೂನ್: ಉತ್ತರಾಖಂಡ ಬಿಜೆಪಿ ಸರ್ಕಾರ 9 ತಿಂಗಳ ಅವಧಿಯಲ್ಲಿ ಚಹಾ ಮತ್ತು ಲಘು ಉಪಾಹಾರಕ್ಕಾಗಿ ₹ 68.59 ಲಕ್ಷ ಖರ್ಚು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆ ಅಡಿ ಬೆಳಕಿಗೆ ಬಂದಿದೆ.
ಚಹಾ, ಲಘು ಉಪಾಹಾರಕ್ಕಾಗಿ ಮಾಡಿದ ಖರ್ಚಿನ ಮಾಹಿತಿ ನೀಡುವಂತೆ ಹೇಮಂತ್ ಸಿಂಗ್ ಗೌನಿಯಾ ಎಂಬುವವರು 2017ರ ಡಿಸೆಂಬರ್ 19ರಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಮನವಿ ಸಲ್ಲಿಸಿದ್ದರು.
2017ರ ಮಾರ್ಚ್ 18ರಂದು ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. ತ್ರಿವೇಂದ್ರ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
‘ಇಲಾಖೆಗಳಿಗೆ ಬರುವ ಅತಿಥಿಗಳು ಮತ್ತು ಇತರರಿಗೆ ಚಹಾ, ಲಘು ಉಪಾಹಾರ ನೀಡುವುದಕ್ಕಾಗಿ ₹68,59,865 ಖರ್ಚು ಮಾಡಲಾಗಿದೆ. ಸಚಿವರು ಮತ್ತು ಇತರ ಅಧಿಕಾರಿಗಳು ಈ ಮೊತ್ತವವನ್ನು ಬಳಸಿದ್ದಾರೆ’ ಎಂದು ಸಿಂಗ್ ಅವರಿಗೆ ಸರ್ಕಾರ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.