ADVERTISEMENT

ಮಲಯಾಳ ಕವಿಗೆ ಬೆದರಿಕೆ ಒಡ್ಡಿದ ಆರು ಆರ್‌ಎಸ್‌ಎಸ್‌ ಕಾರ್ಯಕರ್ತರ ಬಂಧನ

ಏಜೆನ್ಸೀಸ್
Published 6 ಫೆಬ್ರುವರಿ 2018, 12:35 IST
Last Updated 6 ಫೆಬ್ರುವರಿ 2018, 12:35 IST
ಕವಿ ಕುರೀಪುಳ ಶ್ರೀಕುಮಾರ್‌
ಕವಿ ಕುರೀಪುಳ ಶ್ರೀಕುಮಾರ್‌   

ಕೊಲ್ಲಂ (ಕೇರಳ): ಮಲಯಾಳ ಕವಿ ಕುರೀಪ್ಪುಳ ಶ್ರೀಕುಮಾರ್‌ ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಆರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಕಚೇರಿ ಆದೇಶ ನೀಡಿದೆ.

ಶ್ರೀಕುಮಾರ್‌ ಅವರು ಸೋಮವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮರಳುತ್ತಿದ್ದರು. ಆಗ, ಕೊಟ್ಟುಕ್ಕಲ್‌ ಬಳಿ ಅವರನ್ನು ತಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ADVERTISEMENT

ಘಟನೆ ಬಗ್ಗೆ ಲೇಖಕರು ನೀಡಿದ ದೂರಿನ ಅನ್ವಯ 15 ಆರ್‌ಎಸ್‌ಎಸ್‌ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.