ಕೊಲ್ಕತ್ತಾ: ‘ರಸಗುಲ್ಲಾ’ ಸಿಹಿಯನ್ನು ಕಂಡುಹಿಡಿದ ಸಿಹಿ ತಿಂಡಿ ತಯಾರಕ ನೊಬಿನ್ ಚಂದ್ರ ದಾಸ್ ಅವರ ಚಿತ್ರವಿರುವ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಅಂಚೆ ಇಲಾಖೆ ಹೇಳಿದೆ.
ರಸಗುಲ್ಲಾವನ್ನು ಕಂಡುಹಿಡಿದು 150 ವರ್ಷ ಸಂದಿರುವ ಕಾರಣ ಈ ನಿರ್ಧಾರ ಮಾಡಲಾಗಿದೆ ಎಂದು ಅದು ಹೇಳಿದೆ. 2020ಕ್ಕೆ ಚಂದ್ರ ದಾಸ್ ಅವರ 175ನೇ ಜನ್ಮ ದಿನಾಚಣೆ ಇದ್ದು. ಆ ವರ್ಷಕ್ಕೆ ಈ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಬೇಕು ಎಂದು ದಾಸ್ ಕುಟುಂಬದವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.