ADVERTISEMENT

ರೈತರ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವುದು ಸರಿಯಲ್ಲ –ಕೇಜ್ರಿವಾಲ್‌

ಪಿಟಿಐ
Published 26 ನವೆಂಬರ್ 2020, 7:45 IST
Last Updated 26 ನವೆಂಬರ್ 2020, 7:45 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಶಾಂತಿಯುತ ಪ್ರತಿಭಟನೆ ನಡೆಸದಂತೆ ತಡೆಯುವುದು ಮತ್ತು ಅವರ ವಿರುದ್ಧ ಜಲಫಿರಂಗಿ ಪ್ರಯೋಗಿಸುವುದು ಸರಿಯಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಹೇಳಿದ್ದಾರೆ.

‘‌ದೆಹಲಿ ಚಲೊ’ ಪ್ರತಿಭಟನೆಯ ಭಾಗವಾಗಿ ರೈತರು ತಮ್ಮ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಜೊತೆಗೆ ಗಡಿದಾಟುವುದನ್ನು ತಡೆಯಲು ಹರಿಯಾಣ ಗಡಿಯುದ್ಧಕ್ಕೂ ತಡೆಗೋಡೆ ಹಾಕಿ ನಿರ್ಭಂಧಿಸಿತ್ತು. ರೈತರನ್ನು ಚದುರಿಸಲು ಎರಡು ಬಾರಿ ಜಲಫಿರಂಗಿಯನ್ನು ಪ್ರಯೋಗಿಸಲಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ರೈತರಿಗೆ ಸಂವಿಧಾನದತ್ತವಾಗಿ ದೊರೆತಿರುವ ಅಧಿಕಾರ. ಕೇಂದ್ರ ರೂಪಿಸಿರುವ ಎಲ್ಲ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ರೈತವಿರೋಧಿ. ಅವುಗಳನ್ನು ಹಿಂಪಡೆಯುವ ಬದಲು ಪ್ರತಿಭಟನೆಯನ್ನೇ ಹತ್ತಿಕ್ಕುವುದು ಸರಿಯಾದುದಲ್ಲ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.