ADVERTISEMENT

ಪಶ್ಚಿಮ ಬಂಗಾಳ ತಲುಪಲು ರಸ್ತೆ ಹಿಡಿದ ಯೋಗಿ ಆದಿತ್ಯನಾಥ

ಬಿಜೆಪಿ ರ‍್ಯಾಲಿ

ಪಿಟಿಐ
Published 5 ಫೆಬ್ರುವರಿ 2019, 15:57 IST
Last Updated 5 ಫೆಬ್ರುವರಿ 2019, 15:57 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ:ಪಶ್ಚಿಮ ಬಂಗಾಳದ ಪುರೂಲಿಯಾದಲ್ಲಿ ಮಂಗಳವಾರ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಸ್ತೆ ಮೂಲಕ ಪ್ರಯಾಣ ಬೆಳೆಸಿದರು.

ಭಾನುವಾರ ಬಂಗಾಳದ ರಾಯ್‌ಗಂಜ್‌ ಮತ್ತು ಬಲೂರ್‌ಘಾಟ್‌ಗಳಲ್ಲಿ ನಡೆದ ರ‍್ಯಾಲಿಗಳನ್ನು ಉದ್ದೇಶಿಸಿ ಯೋಗಿ ಅವರು ಮಾತನಾಡಬೇಕಿತ್ತು. ಆದರೆ ಬಂಗಾಳದಲ್ಲಿ ಅವರ ಹೆಲಿಕಾಪ್ಟರ್‌ ಇಳಿಯಲು ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿತು. ಹೀಗಾಗಿ ಯೋಗಿ ಅವರು ಫೋನಿನ ಮೂಲಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.

ಹೀಗಾಗಿ ಮಂಗಳವಾರ ಪಶ್ಚಿಮ ಬಂಗಾಳದ ಪುರೂಲಿಯಾ ರ‍್ಯಾಲಿಯಲ್ಲಿ ಭಾಗವಹಿಸಲು ಅವರು ರಸ್ತೆ ಮೂಲಕ ಪ್ರಯಾಣ ಮಾಡಿದರು.

ADVERTISEMENT

ಲಖನೌನಿಂದ ಜಾರ್ಖಂಡ್‌ ರಾಜಧಾನಿ ರಾಂಚಿಗೆ ವಿಮಾನದ ಮೂಲಕ ಅವರು ತೆರಳಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೊಕಾರೊ ತಲುಪಿದರು. ಅಲ್ಲಿಂದ 50 ಕಿ.ಮೀ. ದೂರದಲ್ಲಿರುವ ಪುರೂಲಿಯಾಗೆ ಅವರು ವಾಹನದಲ್ಲಿ ತೆರಳಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.