ADVERTISEMENT

ಮತ್ತೆ ಪವಾರ್‌ ಭೇಟಿಯಾದ ಪ್ರಶಾಂತ್

15 ದಿನಗಳಲ್ಲಿ 3ನೇ ಬಾರಿ ಭೇಟಿ, ವಿವಿಧ ವಿಷಯಗಳ ಚರ್ಚೆ

ಪಿಟಿಐ
Published 23 ಜೂನ್ 2021, 18:45 IST
Last Updated 23 ಜೂನ್ 2021, 18:45 IST
ಪ್ರಶಾಂತ್‌ ಕಿಶೋರ್‌
ಪ್ರಶಾಂತ್‌ ಕಿಶೋರ್‌   

ನವದೆಹಲಿ: ಚುನಾವಣಾ ಕಾರ್ಯತಂತ್ರ ನಿರೂಪಕ ಪ್ರಶಾಂತ್‌ ಕಿಶೋರ್‌ ಅವರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಬುಧವಾರ ಪುನಃ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಹದಿನೈದು ದಿನಗಳ ಅಂತರದಲ್ಲಿ ಈ ನಾಯಕರ ಮಧ್ಯೆ ನಡೆದ ಮೂರನೇ ಭೇಟಿ ಇದಾಗಿದೆ.

ಪವಾರ್‌ ಅವರ ನಿವಾಸದಲ್ಲಿ ಮಂಗಳವಾರ ಎಂಟು ವಿರೋಧ ಪಕ್ಷಗಳ ನಾಯಕರ ಸಭೆ ನಡೆದಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಪವಾರ್‌ ಅವರೇ ವಹಿಸಿದ್ದರು. ಮರುದಿನವೇ ನಡೆದ ಈ ಭೇಟಿಯು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪವಾರ್‌– ಕಿಶೋರ್‌ ಅವರ ಈ ಮಾತುಕತೆಗಳು, ವಿರೋಧಪಕ್ಷಗಳನ್ನು ಒಗ್ಗೂಡಿಸಿ, ಬಿಜೆಪಿಯ ವಿರುದ್ಧ ಬಲಿಷ್ಠವಾದ ತೃತೀಯ ರಂಗದ ರಚನೆಯ ಪ್ರಯತ್ನಗಳಾಗಿವೆ ಎಂದು ಹೇಳಲಾಗುತ್ತಿದೆ.

ವಿವಿಧ ಪಕ್ಷಗಳ ನಾಯಕರಸಭೆಗೂ ಮುನ್ನ ಮಂಗಳವಾರ ಪವಾರ್‌ ಅವರು ಎನ್‌ಸಿಪಿಯ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಸಿದ್ದರು. ಪಕ್ಷದ ಭವಿಷ್ಯದ ನೀತಿಗಳು, ಮುಂದಿನ ಲೋಕಸಭಾ ಚುನಾವಣೆ ಹಾಗೂ ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಅಲ್ಲಿ ಚರ್ಚಿಸಲಾಗಿತ್ತು ಎಂದು ಮುಖಂಡರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.