ADVERTISEMENT

ತಮಿಳುನಾಡು | ಎನ್‌ಡಿಎ ಗೆದ್ದರೆ ಪಳನಿಸ್ವಾಮಿ ಸಿಎಂ: ನೈನಾರ್‌ ನಾಗೇಂದ್ರನ್‌

ಪಿಟಿಐ
Published 24 ಆಗಸ್ಟ್ 2025, 16:08 IST
Last Updated 24 ಆಗಸ್ಟ್ 2025, 16:08 IST
 ನೈನಾರ್‌ ನಾಗೇಂದ್ರನ್‌
 ನೈನಾರ್‌ ನಾಗೇಂದ್ರನ್‌   

ತಿರುಚಿರಾಪಳ್ಳಿ (ತಮಿಳುನಾಡು): 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದರೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್‌ ನಾಗೇಂದ್ರನ್‌ ಅವರು ತಿಳಿಸಿದರು.

ಮೈತ್ರಿಕೂಟದ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಳನಿಸ್ವಾಮಿ ಅವರ ಹೇಳಿಕೆಗಳ ನಡುವಣ ವೈರುಧ್ಯದ ಕುರಿತ ಸುದ್ದಿಗಾರರ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಪಳನಿಸ್ವಾಮಿ ಅವರು ಮೈತ್ರಿಕೂಟವನ್ನು ಮುನ್ನಡೆಸಲಿದ್ದಾರೆ’ ಎಂದರು.

‘ಪಳನಿಸ್ವಾಮಿ ಅವರೇ ತಮಿಳುನಾಡಿನ ಎನ್‌ಡಿಎ ಮೈತ್ರಿಕೂಟದ ನಾಯಕ. ವಿಧಾನಸಭೆ ಚುನಾವಣೆ ಬಳಿಕ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದೇ ಅಂತಿಮ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.