ಚೆನ್ನೈ: ಎಐಎಡಿಎಂಕೆ ಮುಖಂಡರಾದ ಒ. ಪನ್ನೀರ್ಸೆಲ್ವಂ ಅವರು ಪಕ್ಷದ ಸಂಯೋಜಕರಾಗಿ ಹಾಗೂ ಕೆ. ಪಳನಿಸ್ವಾಮಿ ಅವರು ಜಂಟಿ ಸಂಯೋಜಕರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ಈ ಎರಡು ಉನ್ನತ ಹುದ್ದೆಗಳಿಗೆ ಪನ್ನೀರ್ಸೆಲ್ವಂ ಹಾಗೂ ಪಳನಿಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಚುನಾವಣಾಧಿಕಾರಿ ಸಿ. ಪೊನ್ನಯ್ಯನ್ ಅವರು ಘೋಷಿಸಿದ ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
2017ರಲ್ಲಿ ನಡೆದಿದ್ದ ಪಕ್ಷದ ಸಾಮಾನ್ಯ ಸಭೆಯಲ್ಲೂ ಈ ಇಬ್ಬರು ಮುಖಂಡರು ಇದೇ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.