ನವದೆಹಲಿ: ಏರ್ ಇಂಡಿಯಾ ವಿಮಾನಗಳ ಸಿಬ್ಬಂದಿಯು ಇನ್ನುಮುಂದೆ ಪ್ರಕಟಣೆ ನೀಡುವ ವೇಳೆ ‘ಜೈ ಹಿಂದ್’ ಎಂದು ಕೂಗಬೇಕು.
–ಹೀಗೆಂದು ಏರ್ ಇಂಡಿಯಾದ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಅಮಿತಾಭ್ ಸಿಂಗ್ ಅವರು ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ.
ಪ್ರತಿ ಬಾರಿ ಪ್ರಕಟಣೆ ನೀಡಿದ ಬಳಿಕ ಕೊನೆಯಲ್ಲಿ ಜೈ ಹಿಂದ್ ಎಂದು ಉತ್ಸಾಹದಿಂದ ಹಾಗೂ ಕಡ್ಡಾಯವಾಗಿ ಹೇಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
2016ರಲ್ಲಿ ಏರ್ ಇಂಡಿಯಾ ಮುಖ್ಯಸ್ಥರಾಗಿದ್ದ ಅಶ್ವನಿ ಲೋಹಾನಿ ಅವರು ಪೈಲಟ್ಗಳಿಗೆ ಇಂತಹದೇ ಸೂಚನೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.