ADVERTISEMENT

ದೆಹಲಿಗೆ ಅಭಿನಂದನ್: ಏರ್ ವೈಸ್ ಮಾರ್ಷಲ್

ಅಟ್ಟಾರಿಯಲ್ಲಿ ಸುದ್ದಿಗೋಷ್ಠಿ

ಏಜೆನ್ಸೀಸ್
Published 1 ಮಾರ್ಚ್ 2019, 16:37 IST
Last Updated 1 ಮಾರ್ಚ್ 2019, 16:37 IST
   

ನವದೆಹಲಿ:ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಪಾಕಿಸ್ತಾನ ನಮಗೆ ಹಸ್ತಾಂತರಿಸಿದೆ ಎಂದುಏರ್ ವೈಸ್ ಮಾರ್ಷಲ್ ಆರ್‌.ಜಿ.ಕೆ.ಕಪೂರ್ ತಿಳಿಸಿದರು.

ಹಸ್ತಾಂತರವಾದ ಬಳಿಕ ಅಟ್ಟಾರಿ ಗಡಿಯ ಬಳಿ ಸುದ್ದಿಗೋಷ್ಠಿ ನಡೆಸಿದ ಅವರು, ಅಭಿನಂದನ್ ಅವರನ್ನುಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಪ್ಯಾರಾಚೂಟ್‌ ಮೂಲಕ ವಿಮಾನದಿಂದ ಜಿಗಿದ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಅಗತ್ಯವಿದೆ ಎಂದರು.

ADVERTISEMENT

ನಿರ್ಮಲಾ ಸ್ವಾಗತ: ಅಭಿನಂದನ್ ಭಾರತದ ಭೂಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಆ ಕುರಿತು ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಹರ್ಷ ವ್ಯಕ್ತಪಡಿಸಿದ್ದು, ‘ಜೈ ಹಿಂದ್’ ಎಂದು ಟ್ವೀಟ್ ಮಾಡಿದ್ದಾರೆ.

‘ವಿಂಗ್ ಕಮಾಂಡರ್‌ ಅಭಿನಂದನ್‌ ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮ ಶೌರ್ಯ, ಸಾಹಸವನ್ನುಈಡೀ ದೇಶ ಕೊಂಡಾಡುತ್ತಿದೆ. ನೀವು ನಮ್ಮ ಯುವಜನತೆಗೆ ಸ್ಫೂರ್ತಿ, ನಿಮಗೊಂದು ಸೆಲ್ಯೂಟ್‌, ವಂದೇ ಮಾತರಂ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.