ಶ್ರೀನಗರ: ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪಹಲ್ಗಾಮ್ ಮಾರ್ಗದಲ್ಲಿ ಪುನರ್ ಆರಂಭಗೊಂಡಿದೆ.
ಭೂಕುಸಿತ ಮತ್ತು ಬಂಡೆಗಳ ಕುಸಿತದ ಕಾರಣದಿಂದ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗದ ಯಾತ್ರೆಯನ್ನು ಬುಧವಾರದಿಂದ ಸ್ಥಗಿತಗೊಳಿಸಲಾಗಿತ್ತು.
ಸದ್ಯಕ್ಕೆ ಪಹಲ್ಗಾಮ್ ಮಾರ್ಗ ಮಾತ್ರ ಸಂಚಾರಕ್ಕೆ ಮುಕ್ತವಾಗಿದ್ದು, ಬಾಲ್ಟಾಲ್ ಮಾರ್ಗ ಯಾತ್ರೆಗೆ ಇನ್ನೂ ಸುಗಮವಾಗಿಲ್ಲ ಎಂದು ಅಮರನಾಥ ದೇವಾಲಯ ಮಂಡಳಿ(ಎಸ್ಎಎಸ್ಬಿ) ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.