ನವದೆಹಲಿ: ಓಮೈಕ್ರಾನ್ ರೂಪಾಂತರದ ಆತಂಕವಿರುವುದರಿಂದ ಸದ್ಯಕ್ಕೆ ರೈಲುಗಳಲ್ಲಿ ಪ್ರಯಾಣಿಕರಿಗೆ ಬೆಡ್ಶೀಟ್ ನೀಡುವುದನ್ನು ಪುನರಾರಂಭಿಸುವುದಿಲ್ಲ ಎಂದುರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು.
ಕೊರೊನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸೇವೆಗಳಾದಬಿಸಿ ಬೇಯಿಸಿದ ಊಟ ನೀಡುವ ಸೇವೆಯನ್ನು ಮರು ಪ್ರಾರಂಭಿಸಿದೆ. ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಸಾಮಾನ್ಯ ದರದಲ್ಲೇ ಓಡುತ್ತಿದ್ದು ಫ್ಲ್ಯಾಟ್ಫಾರ್ಮ್ ಟಿಕೆಟ್ ಅನ್ನೂ ₹ 10ಕ್ಕೆ ಇಳಿಸಲಾಗಿದೆ. ದೇಶದ ವಿವಿಧ ಭಾಗಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸರಕು ಸೇವೆಗಳ ಪೂರೈಕೆಯನ್ನು ಮುಂದುವರಿಸಲಾಗಿದೆಎಂದು ಸಭೆಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.