ADVERTISEMENT

ಅಂಪನ್ ಚಂಡಮಾರುತ ಸಂಕಷ್ಟ

ಪಿಟಿಐ
Published 20 ಮೇ 2020, 2:23 IST
Last Updated 20 ಮೇ 2020, 2:23 IST
ಚೆನ್ನೈ ಸಮುದ್ರ ಕಿನಾರೆಗೆ  ಅಪ್ಪಳಿಸಿದ ಅಲೆ
ಚೆನ್ನೈ ಸಮುದ್ರ ಕಿನಾರೆಗೆ ಅಪ್ಪಳಿಸಿದ ಅಲೆ    

ಕೋಲ್ಕತ್ತ/ನವದೆಹಲಿ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಪನ್‌ ಚಂಡಮಾರುತವು ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಲಿದೆ. ತೀವ್ರ ಬಿರುಗಾಳಿ ಮತ್ತು ಭಾರಿ ಮಳೆ ಉಂಟಾಗಲಿರುವ ಕಾರಣ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಅಂಪನ್‌ ಚಂಡಮಾರುತವು ಸೋಮವಾರ ತೀವ್ರ ಚಂಡಮಾರುತದ (ಸೂಪರ್ ಸೈಕ್ಲೋನ್‌) ಸ್ವರೂಪ ಪಡೆದಿತ್ತು. ಹೀಗಾಗಿ ಆಂಧ್ರ
ಪ್ರದೇಶದ ಕರಾವಳಿ ಮತ್ತು ಒಡಿಶಾದ ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇತ್ತು. ಆದರೆ, ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತದ ತೀವ್ರತೆ ಕಡಿಮೆಯಾಯಿತು. ಹೀಗಾಗಿ ಒಡಿಶಾದ ಕೆಲವು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಯಿತು. ಹಲವೆಡೆ ತೀವ್ರ ಬಿರುಗಾಳಿ ಬೀಸಿತು. ಪಶ್ಚಿಮ ಬಂಗಾಳದ ಹಲವೆಡೆಯೂ ಭಾರಿ ಮಳೆಯಾಯಿತು.

- ಚಂಡಮಾರುತವು ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಳದ ಕರಾವಳಿ ಪಟ್ಟಣ ದಿಗಾಕ್ಕೆ ಅಪ್ಪಳಿಸಲಿದೆ

ADVERTISEMENT

- ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಹಲವು ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ

- ಪಶ್ಚಿಮ ಬಂಗಾಳದ ಪರ್ಬಾ ಮೇದಿನಿಪುರ ಜಿಲ್ಲೆ ಮತ್ತು ಕರಾವಳಿ ಗ್ರಾಮಗಳ 3 ಲಕ್ಷ ಜನರನ್ನು ತೆರವು ಮಾಡಲಾಗಿದೆ

- ತೆರವು ಮಾಡಲಾದ ಜನರನ್ನು, ಸುರಕ್ಷಿತ ಪ್ರದೇಶಗಳಲ್ಲಿನ ಶಿಬಿರಗಳಲ್ಲಿ ಇರಿಸಲಾಗಿದೆ

- ಕೋವಿಡ್‌ ಸೋಂಕು ವ್ಯಾಪಕವಾಗಿ ಇರುವ ಸಂದರ್ಭದಲ್ಲೇ ಚಂಡಮಾರುತ ಬಂದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಶಿಬಿರಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆಯನ್ನು ನಿರ್ವಹಿಸಲು ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.