ADVERTISEMENT

ಕೊರೊನಾ ಸೋಂಕು: ಜ್ವರ ಕಾರಣ ಗ್ರಾಮಕ್ಕೆ ಪ್ರವೇಶವಿಲ್ಲ, ದೋಣಿಯಲ್ಲೇ ಕ್ವಾರಂಟೈನ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 12:32 IST
Last Updated 2 ಏಪ್ರಿಲ್ 2020, 12:32 IST
ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬರು ದೋಣಿಯಲ್ಲೇ ಕ್ವಾರೆಂಟೈನ್
ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬರು ದೋಣಿಯಲ್ಲೇ ಕ್ವಾರೆಂಟೈನ್    

ಪಶ್ಚಿಮ ಬಂಗಾಳ: ಜ್ವರ ಬಂದ ಕಾರಣ ಗ್ರಾಮ ಪ್ರವೇಶಕ್ಕೆ ನಿರಾಕರಿಸಿದ್ದರಿಂದ ವ್ಯಕ್ತಿಯೊಬ್ಬರು ದೋಣಿಯ ಮೇಲೆಯೇ ಕ್ರಾರಂಟೈನ್ ದಿನಗಳನ್ನು ಕಳೆಯುತ್ತಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಇಲ್ಲಿನ ನಾಡಿಯಾ ಜಿಲ್ಲೆ ನಬದ್ವೀಪ್ ಎಂಬಲ್ಲಿ ಈ ಘಟನೆ ನಡೆದಿದೆ. ಹಿರಿಯ ವ್ಯಕ್ತಿಯೊಬ್ಬರು ತನ್ನ ಸಂಬಂಧಿಕರ ಮನೆಗೆಂದು ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದಂತೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು.

ಈ ವಿಷಯ ತಿಳಿಯುತ್ತಿದ್ದಂತೆ ಕೊರೊನಾ ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ವ್ಯಕ್ತಿಯನ್ನು ಗ್ರಾಮದ ಒಳಗೆ ಪ್ರವೇಶ ಮಾಡದಂತೆ ಅಡ್ಡಿಪಡಿಸಿದರು. ಕೂಡಲೆ ವೈದ್ಯರನ್ನು ಸಂಪರ್ಕಿಸಿದ ವ್ಯಕ್ತಿ ಅವರಿಂದ ಸಲಹೆಪಡೆದರು. ನಂತರ ಹಬೀಬಪುರದ ಪಕ್ಕದಲ್ಲಿಯೇ ಇರುವ ನದಿಯಲ್ಲಿ ದೋಣಿಯನ್ನೇ ಮನೆ ಮಾಡಿಕೊಂಡರು. 14 ದಿನಗಳ ಕಾಲ ಅಲ್ಲಿಯೇ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಈಗ ಅಲ್ಲಿಯೇ ಊಟ ನಿದ್ರೆ ವಿಶ್ರಾಂತಿ ಎಲ್ಲವೂನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.