ADVERTISEMENT

ಅಧಿಕಾರಕ್ಕಾಗಿ ಅಣ್ಣಾ ಅವರನ್ನು ಬಳಸಿಕೊಂಡಿದ್ದ ಎಎಪಿ: ರಿಜಿಜು

ಪಿಟಿಐ
Published 16 ಏಪ್ರಿಲ್ 2023, 13:51 IST
Last Updated 16 ಏಪ್ರಿಲ್ 2023, 13:51 IST
ಕಿರಣ್ ರಿಜಿಜು
ಕಿರಣ್ ರಿಜಿಜು   

ನವದೆಹಲಿ: ‘ಭ್ರಷ್ಟಾಚಾರದ ಹೆಸರಿನಲ್ಲಿ ಅಧಿಕಾರ ಹಿಡಿಯಲು ಆಮ್‌ ಆದ್ಮಿ ಪಕ್ಷವು (ಎಎಪಿ) ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಬಳಸಿಕೊಂಡಿತ್ತು’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಭಾನುವಾರ ಆರೋಪಿಸಿದ್ದಾರೆ.

ಸಂದರ್ಶನವೊಂದರಲ್ಲಿ ಅಣ್ಣಾ ಅವರು ದೆಹಲಿ ಅಬಕಾರಿ ನೀತಿಯನ್ನು ಟೀಕಿಸುತ್ತಿರುವ ವಿಡಿಯೊವನ್ನೂ ಸಚಿವರು ಹಂಚಿಕೊಂಡಿದ್ದಾರೆ.

'ಈಗ ಅವರು ಅಧಿಕಾರದಲ್ಲಿದ್ದಾರೆ. ಅಣ್ಣಾ ಅವರ ಮಾತುಗಳನ್ನು ಕೇಳುವುದಿಲ್ಲ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.