ನವದೆಹಲಿ: ದೇಶದ ಪೌರತ್ವ ಬಯಸಿ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಅರ್ಜಿ ಸಲ್ಲಿಸುವಾಗ ತಮ್ಮ ಧರ್ಮ ಮತ್ತು 2014ರ ಡಿಸೆಂಬರ್ಗೂ ಮೊದಲು ದೇಶಕ್ಕೆ ಬಂದಿದ್ದೇವೆ ಎಂಬುದನ್ನು ಸಾಬೀತುಪಡಿಸುವ ದಾಖಲೆಯನ್ನು ಒದಗಿಸುವುದು ಕಡ್ಡಾಯ.
ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಮುನ್ನ 11 ವರ್ಷ ನೆಲೆಸಿರಬೇಕು ಎಂಬುದಕ್ಕೆ ತಿದ್ದುಪಡಿ ತರಲಾಗಿದ್ದು, ಹೊಸ ಕಾಯ್ದೆಯಲ್ಲಿ ಐದು ವರ್ಷಗಳಿಗೆ ಇಳಿಸಲಾಗಿದೆ. ತಾವಿದ್ದ ರಾಷ್ಟ್ರ, ಧರ್ಮ, ಎಷ್ಟು ವರ್ಷದಿಂದ ದೇಶದಲ್ಲಿ ನೆಲೆಸಿದ್ದೇವೆ ಎಂಬ ಮಾಹಿತಿಗಳನ್ನು ಒದಗಿಸಬೇಕು.
ಸಂಸತ್ತಿನ ಜಂಟಿ ಸಮಿತಿಯ ವರದಿಯನುಸಾರ, ಈ ಮೂರು ರಾಷ್ಟ್ರಗಳಿಂದ 31,313 ಧಾರ್ಮಿಕ ಅಲ್ಪಸಂಖ್ಯಾತರು ವಲಸೆ ಬಂದಿದ್ದು, ಧಾರ್ಮಿಕ ಕಿರುಕುಳದ ಕಾರಣ ನೀಡಿದ್ದಾಗಿ ಇವರಿಗೆ ದೀರ್ಘಾವಧಿಯ ವೀಸಾ ನೀಡಲಾಗಿದೆ. ಹೀಗೆ ವಲಸೆ ಬಂದವರಲ್ಲಿ 31,313 ಹಿಂದೂಗಳು, 5,807 ಸಿಖ್ಖರು, 55 ಮಂದಿ ಕ್ರೈಸ್ತರು ಮತ್ತು ಬೌದ್ಧ ಮತ್ತು ಪಾರ್ಸಿ ಧರ್ಮದ ಒಬ್ಬರು ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.