ADVERTISEMENT

‘ಮೆಹಂದಿ’ ಹಚ್ಚಿಕೊಂಡಿದ್ದಕ್ಕೆ ಶಿಕ್ಷೆ: ಪ್ರತಿಭಟನೆ ಬಳಿಕ ಕ್ಷಮೆ ಕೋರಿದ ಶಾಲೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 7:27 IST
Last Updated 2 ಆಗಸ್ಟ್ 2018, 7:27 IST
   

ಭರೂಚ್‌(ಗುಜರಾತ್‌): ಮೆಹಂದಿ ಹಚ್ಚಿಕೊಂಡು ಶಾಲೆಗೆ ಬಂದಿದ್ದಕ್ಕೆ ಶಿಕ್ಷೆ ಅನುಭವಿಸಿದ್ದ ಕೆಲವು ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ ಬಳಿಕ ಇಲ್ಲಿನ ಖಾಸಗಿ ಶಾಲೆಯೊಂದು ಕ್ಷಮೆ ಕೋರಿದೆ.

ಕ್ರಿಶ್ಚಿಯನ್‌ ಟ್ರಸ್ಟ್‌ ನಡೆಸುತ್ತಿರುವಕ್ವೀನ್ಸ್‌ ಆಫ್‌ ಏಂಜಲ್ಸ್‌ ಶಾಲೆಯಲ್ಲಿ ನಡೆದ ಈ ಪ್ರಕರಣ ಇದೀಗ ಸುದ್ದಿಯಾಗಿದೆ.

ಮೆಹಂದಿ ಹಚ್ಚಿಕೊಂಡು ಬಂದಿದ್ದ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ವಿಚಾರ ಪೋಷಕರು ಹಾಗೂ ಸ್ಥಳೀಯ ಹಿಂದೂ ಸಂಘಟನೆಗಳಿಗೆ ತಿಳಿದು ಪ್ರತಿಭಟನೆ ನಡೆದಿತ್ತು.

ADVERTISEMENT

ಬಳಿಕ ಕ್ಷಮೆ ಕೋರಿರುವ ಶಾಲೆಯಆಡಳಿತ, ‘ನಾವು ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ವಿದ್ಯಾರ್ಥಿಗಳನ್ನು ಅವರ ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವುದಿಲ್ಲ. ಈ ನಿಯಮವನ್ನು ಶಾಲೆಯ ಆರಂಭದಿಂದಲೂ ಅಳವಡಿಸಿಕೊಂಡು ಬರಲಾಗಿದೆ. ನಾವು ಯಾರೊಬ್ಬರನ್ನೂ ಅಮಾನತು ಮಾಡಿಲ್ಲ. ಇಂತಹ ಪ್ರಕರಣಗಳು ಪುನರಾವರ್ತನೆಯಾಗುವುದಿಲ್ಲ’ ಎಂದು ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.