ADVERTISEMENT

ಆಶ್ರಮಕ್ಕೆ ಬೆಂಕಿ: ‘ಸಂಘ ಪರಿವಾರದ ಕೈವಾಡ ಶಂಕೆ’

ಪಿಟಿಐ
Published 27 ಅಕ್ಟೋಬರ್ 2018, 19:00 IST
Last Updated 27 ಅಕ್ಟೋಬರ್ 2018, 19:00 IST
   

ತಿರುವನಂತಪುರ: ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶಕ್ಕೆ ಬೆಂಬಲ ನೀಡಿದ್ದ ಸ್ವಾಮಿ ಸಂದೀಪಾನಂದ ಗಿರಿ ಅವರ ಆಶ್ರಮದ ಮೇಲೆ ಶನಿವಾರ ಬೆಳಗಿನ ಜಾವ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿ ಪರಾರಿಯಾಗಿದೆ.

ಆಶ್ರಮದಲ್ಲಿದ್ದ ಎರಡು ಕಾರು ಮತ್ತು ಎರಡು ಸ್ಕೂಟರ್‌ ಬೆಂಕಿಗಾಹುತಿಯಾಗಿವೆ. ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಸಚಿವೆ ಕೆ.ಕೆ. ಶೈಲಜಾ ಅವರು ಕೃತ್ಯವನ್ನು ಖಂಡಿಸಿದ್ದಾರೆ.

ADVERTISEMENT

ಕೋಮುವಾದಿ ಶಕ್ತಿಗಳು ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಪಿಣರಾಯಿ ಗುಡುಗಿದ್ದಾರೆ.

ಆಶ್ರಮ ಮೇಲೆ ನಡೆದ ದಾಳಿಯ ಹಿಂದೆ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಕೈವಾಡ ಇದೆ ಎಂದು ಸಂದೀಪಾನಂದ ಗಿರಿ ಶಂಕಿಸಿದ್ದಾರೆ.

ಸಚಿವೆ ಶೈಲಜಾ ಕೂಡಾ ಇದು ಸಂಘ ಪರಿವಾರದ ಕೃತ್ಯ ಎಂದು ಆರೋಪಿಸಿದ್ದಾರೆ.

ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿಯ ನಾಯಕ ಪಿ.ಕೆ. ಕೃಷ್ಣದಾಸ್‌, ಶಬರಿಮಲೆ ವಿವಾದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸಿಪಿಎಂ ಸೃಷ್ಟಿಸಿದ ನಾಟಕವಿದು ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.