ADVERTISEMENT

ಬಾಬರಿ ಮಸೀದಿ ಪ್ರಕರಣ: ಜುಲೈ 24ಕ್ಕೆ ಅಡ್ವಾಣಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 12:11 IST
Last Updated 20 ಜುಲೈ 2020, 12:11 IST
ಎಲ್‌.ಕೆ. ಅಡ್ವಾಣಿ
ಎಲ್‌.ಕೆ. ಅಡ್ವಾಣಿ   

ಲಖನೌ:ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ,ಜುಲೈ 24 ರಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ಅವರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ವಿಶೇಷ ಸಿಬಿಐ ನ್ಯಾಯಾಲಯ ಸೋಮವಾರ ತಿಳಿಸಿದೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 313ರ ಅನುಸಾರ ಅವರ ಹೇಳಿಕೆಯನ್ನು ವಿಡಿಯೊಕಾನ್ಫರೆನ್ಸ್‌ ಮೂಲಕ ದಾಖಲಿಸಲಾಗುತ್ತದೆ.

ಪ್ರಕರಣದ ಇತರ ಆರೋಪಿಗಳಾಗಿರುವ ಶಿವಸೇನಾ ಮುಖಂಡ ಸತೀಶ್ ಪ್ರಧಾನ್ ವಿಚಾರಣೆ ಜುಲೈ 22ರಂದು ಮತ್ತುಜುಲೈ 23ರಂದು ಬಿಜೆಪಿಯ ಹಿರಿಯ ಮುಖಂಡಮುರಳಿ ಮನೋಹರಜೋಷಿತಮ್ಮ ಹೇಳಿಕೆಗಳನ್ನು ವಿಡಿಯೊ ಮೂಲಕ ದಾಖಲಿಸುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.