ಡಾಕಾ: ಭಾರತದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಾಣುತ್ತಿರುವ ಹಿಂದೆಯೇ ಬಾಂಗ್ಲಾದೇಶವು ಭಾರತ ಜೊತಿಗಿನ ಗಡಿಯನ್ನು ಎರಡು ವಾರಗಳ ಅವಧಿಗೆ ಬಂದ್ ಮಾಡಿದೆ.
ತಾತ್ಕಾಲಿಕವಾಗಿ ಪ್ರಯಾಣಕ್ಕೆ ನಿರ್ಬಂಧ ಹೇರಿ ಗಡಿ ಬಂದ್ ಮಾಡುತ್ತಿದ್ದೇವೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಗಣನೀಯ ಏರಿಕೆಯೇ ಇದಕ್ಕೆ ಕಾರಣ. ಈ ನಿರ್ಬಂಧ ಏ. 26ರಿಂದ ಜಾರಿಗೆ ಬರಲಿದೆ ಎಂದು ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ತಿಳಿಸಿದರು.
ಭಾರತದಿಂದ ಬರುವವರಿಗೆ ಜರ್ಮನಿ ಸಹ ನಿರ್ಬಂಧ ವಿಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.