ರಾಯಪುರ:ಪಶ್ಚಿಮ ಬಂಗಾಳದಲ್ಲಿ ಸುಮಾರು 15 ವರ್ಷಗಳ ಹಿಂದೆ ಕಾಣೆಯಾಗಿದ್ದ 55 ವರ್ಷದ ಬುದ್ದಿಮಾಂದ್ಯ ಮಹಿಳೆಯನ್ನು ಛತ್ತೀಸ್ಗಡ ರಾಜ್ಯಕಾನೂನು ಸೇವೆಗಳ ಪ್ರಾಧಿಕಾರವು(ಸಿಜಿಎಸ್ಎಲ್ಎಸ್ಎ) ಭಾನುವಾರ ಅವರ ಕುಟುಂಬದ ವಶಕ್ಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಸುಮಾರು 15 ವರ್ಷಗಳ ಹಿಂದೆಲಕ್ಷ್ಮಿ ಪಾರ್ವಿ ಅವರು ತಮ್ಮ ಕುಟುಂಬದವರಿಂದ ಬೇರ್ಪಟ್ಟಿದ್ದರು. ಆದರೆ ಅವರು ಹೇಗೋಛತ್ತೀಸ್ಗಡ ತಲುಪಿದ್ದಾರೆ ಎಂದು ಸಿಜಿಎಸ್ಎಲ್ಎಸ್ಎನ ಅಧಿಕಾರಿ ಸಿದ್ದಾರ್ಥ್ ಅರ್ಗವಾಲ್ ಅವರು ಹೇಳಿದರು.
‘2017ರಲ್ಲಿ ಛತ್ತೀಸ್ಗಡದ ಕೋರ್ಬಾ ಜಿಲ್ಲೆಯ ಕಾನ್ಸ್ಟೇಬಲ್ ಒಬ್ಬರು ಪಾರ್ವತಿ ಬೇನ್ ಎಂಬ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಸೆಂದ್ರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರು ಮಾನಸಿಕ ಆರೋಗ್ಯ ಸಂಬಂಧಿತ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈ ವರ್ಷ ಜೂನ್ ತಿಂಗಳಲ್ಲಿ ಆಸ್ಪತ್ರೆಯು ಮಹಿಳೆಯ ಚಿಕಿತ್ಸೆಯ ಪೂರ್ಣಗೊಂಡಿದೆ ಎಂದು ಸಿಜಿಎಸ್ಎಲ್ಎಸ್ಎಗೆ ಪತ್ರ ಬರೆದಿತ್ತು. ಇದರಲ್ಲಿ ಚಿಕಿತ್ಸೆ ಪೂರ್ಣಗೊಂಡ ಬಳಿಕ ಮಹಿಳೆ ತಾನು ದಕ್ಷಿಣ 24 ಪರಗಣದ ನಿವಾಸಿ ಎಂದು ಬಹಿರಂಗ ಪಡಿಸಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
‘ಪಶ್ಚಿಮ ಬಂಗಾಳದರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಲಕ್ಷ್ಮಿ ಪಾರ್ವಿಯ ಮಾಹಿತಿ ಮತ್ತು ಛಾಯಚಿತ್ರವನ್ನು ಕಳುಹಿಸಲಾಯಿತು. ಛಾಯಾಚಿತ್ರದ ಸಹಾಯದೊಂದಿಗೆ ಎರಡು ಇಲಾಖೆಗಳು ಜಂಟಿಯಾಗಿ ಲಕ್ಷ್ಮಿ ಅವರನ್ನು ಮನೆಗೆ ಸೇರಿಸಿವೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.