ಇಂದೋರ್: ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಇಂದೋರ್ನ ಲಸಿಕೆ ಕೇಂದ್ರವೊಂದರಲ್ಲಿ ಕೇಕ್ ಕತ್ತರಿಸಿ ಬಿಜೆಪಿ ನಾಯಕಿಯೊಬ್ಬರು ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ವಿಡಿಯೊ ಎಲ್ಲೆಡೆ ಹರದಾಡಿದ್ದು, ಈ ಬಗ್ಗೆ ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿದೆ.
ಇಂದೋರ್ನ ವಾರ್ಡ್ ಸಂಖ್ಯೆ 58 ರ ಲಸಿಕೆ ಕೇಂದ್ರದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ವಾರ್ಡ್ನ ಬಿಜೆಪಿ ಘಟಕದ ಮುಖ್ಯಸ್ಥೆ ಮಾಧುರಿ ಜೈಸ್ವಾಲ್ ಅವರು ಲಸಿಕಾ ಕೇಂದ್ರದ ಕಾರ್ಯವೈಖರಿ ಪರಿಶೀಲನೆಗೆ ಮಾತ್ರ ತೆರಳಿದ್ದೆ. ಆದರೆ, ಈ ಸಂದರ್ಭ ಬೆಂಬಲಿಗರೊಬ್ಬರು ಕೇಕ್ ತಂದು ಜನ್ಮದಿನವನ್ನು ಆಚರಿಸಲು ಮುಂದಾದಾಗ ನಿರಾಕರಿಸಲು ಆಗಲಿಲ್ಲ ಎಂದಿದ್ದಾರೆ.
‘ಎಂಪಿಎಚ್ಆರ್ಸಿ(ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗ)ವು ಈ ಘಟನೆ ಕುರಿತಂತೆ ಸುಮೊಟೊ ಪ್ರಕರಣ ದಾಖಲಿಸಿದೆ.
ಇಂದೋರ್ ವಿಭಾಗದ ಆಯುಕ್ತರು ಮತ್ತು ಪೊಲೀಸ್ ಇನ್ಸ್ಸ್ಪೆಕ್ಟರ್ ಜನರಲ್ ಅವರಿಗೆ ಎರಡು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.