ನವದೆಹಲಿ: ಆರ್ಬಿಐ ನೂತನ ಗವರ್ನರ್ ಶಕ್ತಿಕಾಂತ ದಾಸ್ ಅವರ ಶೈಕ್ಷಣಿಕ ಅರ್ಹತೆ ಎಂ.ಎ ಇತಿಹಾಸ.ಅವರು ಆರ್ಬಿಐನ್ನು ಇತಿಹಾಸವನ್ನಾಗಿ ಮಾಡುವುದು ಬೇಡ ಎಂದು ನಾನು ಆಶಿಸುತ್ತೇನೆ.ಹೊಸಬರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಗುಜರಾತಿನ ಮಾಜಿ ಸಚಿವ ಜಯ್ ನಾರಾಯಣ್ ವ್ಯಾಸ್ ಟ್ವೀಟ್ ಮಾಡಿದ್ದಾರೆ.
2012 ಮತ್ತು2017ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ವ್ಯಾಸ್ 2012ರವರೆಗೆ ಗುಜರಾತಿನಲ್ಲಿ ಮೋದಿ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.