ನವದೆಹಲಿ: ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ರಮೇಶ್ ಬಿಧೂಢಿ ಅವರು ಗುರುವಾರ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಮುಂದೆ ವಿಷಾದ ವ್ಯಕ್ತಪಡಿಸಿದ್ದಾರೆ.
ಹಕ್ಕುಬಾಧ್ಯತಾ ಸಮಿತಿಯು ಗುರುವಾರ ಬಿಧೂಢಿ ಮತ್ತು ಅಲಿ ಅವರ ವಾದವನ್ನು ಪ್ರತ್ಯೇಕವಾಗಿ ಆಲಿಸಿತು ಎಂದು ಮೂಲಗಳು ಹೇಳಿವೆ.
ಬಿಧೂಢಿ ಅವರು ವಿಷಾದ ವ್ಯಕ್ತಪಡಿಸಿರುವ ಕಾರಣ ಸಮಿತಿಯು ಈ ವಿವಾದಕ್ಕೆ ತೆರೆಎಳೆದು, ಸ್ಪೀಕರ್ಗೆ ವರದಿ ಒಪ್ಪಿಸುವ ಸಾಧ್ಯತೆಯಿದೆ ಎಂದು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.