ADVERTISEMENT

ಸೂಫಿಸಂತರ ಸಮಾವೇಶದತ್ತ ಬಿಜೆಪಿ ಚಿತ್ತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 22:15 IST
Last Updated 19 ಫೆಬ್ರುವರಿ 2023, 22:15 IST
   

ನವದೆಹಲಿ: ಬಿಜೆಪಿ ದೇಶದಾದ್ಯಂತ ಸೂಫಿಸಂತರ ಸಮಾವೇಶ ನಡೆಸಲು ಯೋಜಿಸುತ್ತಿದೆ. ಸಮಾವೇಶದಲ್ಲಿ ಹಜರತ್ ನಿಜಾಮುದ್ದೀನ್, ಅಜ್ಮೀರ್ ಷರೀಫ್, ಬರೇಲಿ ಷರೀಫ್ ದರ್ಗಾದಂತಹ ಧಾರ್ಮಿಕ ಕೇಂದ್ರಗಳ ಸೂಫಿ ನಾಯಕರು ಇರುವ ಸಾಧ್ಯತೆಯಿದೆ.

ಪಕ್ಷದ ಅಲ್ಪಸಂಖ್ಯಾತ ವಿಭಾಗವು ಮಾರ್ಚ್‌ನಲ್ಲಿ ‘ಸೂಫಿ ಸಂತರ ಸಂವಾದ’ ಹೆಸರಿನಲ್ಲಿ ಸಮಾವೇಶವನ್ನು ನಡೆಸಲಿದೆ ಎಂದು ಈ ಪ್ರಕ್ರಿಯೆಯಲ್ಲಿ ತೊಡಗಿರುವ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಮೋದಿ ಅವರ ಅಭಿವೃದ್ಧಿ ಕಾರ್ಯಸೂಚಿ ಮತ್ತು ಬಿಜೆಪಿ ಎಲ್ಲ ಧರ್ಮಗಳನ್ನು ಹೇಗೆ ಒಳಗೊಳ್ಳುತ್ತದೆ ಎಂಬುದನ್ನು ಅರಿಯಲು ಈ ಸಮಾವೇಶ ಆಯೋಜಿಸಲಾಗುತ್ತಿದೆ. ಶೀಘ್ರದಲ್ಲೇ ಪ್ರಧಾನಿ ಅವರೊಂದಿಗೆ ಸೂಫಿ ಸಂತರ ಸಭೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.