ADVERTISEMENT

ಸಚಿವರಾಗಿ ನೇಮಕಗೊಂಡ ಬಳಿಕವೂ ಕಾರ್ಯಕರ್ತರಾಗಿ ದುಡಿಯಿರಿ: ಮೋದಿ ಕರೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:30 IST
Last Updated 3 ಆಗಸ್ಟ್ 2019, 19:30 IST
ಅಮಿತ್ ಶಾ ಹಾಗೂ ಮೋದಿ ಸಮಾಲೋಚನೆ ನಡೆಸಿದರು–‍ಪಿಟಿಐ ಚಿತ್ರ
ಅಮಿತ್ ಶಾ ಹಾಗೂ ಮೋದಿ ಸಮಾಲೋಚನೆ ನಡೆಸಿದರು–‍ಪಿಟಿಐ ಚಿತ್ರ   

ನವದೆಹಲಿ: ಸಂಸದರಾಗಿ ಆಯ್ಕೆಯಾಗಿ ಅಥವಾ ಸಚಿವರಾಗಿ ನೇಮಕಗೊಂಡ ಬಳಿಕವೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಳಮಟ್ಟದ ಕಾರ್ಯಕರ್ತರಾಗಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಸಂಸದರಿಗೆ ಶನಿವಾರ ಕರೆ ನೀಡಿದರು.

ಪಕ್ಷದಿಂದ ಆಯ್ಕೆಯಾಗಿರುವ ಸಂಸದರಿಗಾಗಿ ಏರ್ಪಡಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಪಕ್ಷ ಈ ಹಂತಕ್ಕೆ ಬೆಳೆದಿರುವುದು ಸಿದ್ಧಾಂತ ಹಾಗೂ ಚಿಂತನೆಗಳಿಂದಾಗಿಯೇ ಹೊರತು ಯಾವುದೋ ಒಂದು ಕುಟುಂಬದಿಂದಾಗಿ ಅಲ್ಲ’ ಎಂದರು.

‘ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ, ವಿದ್ಯಾರ್ಥಿಗಳ ರೀತಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಧಾನಿ ಕಿವಿಮಾತು ಹೇಳಿದರು’ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು.

ADVERTISEMENT

ಸಂಸದರನ್ನು ಉದ್ದೇಶಿಸಿ ಪಕ್ಷದ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.