ADVERTISEMENT

ಟಿಆರ್‌ಎಸ್‌ನ 20–30 ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನ: ತೆಲಂಗಾಣ ಸಿಎಂ

ಪಿಟಿಐ
Published 30 ಅಕ್ಟೋಬರ್ 2022, 15:17 IST
Last Updated 30 ಅಕ್ಟೋಬರ್ 2022, 15:17 IST
ಕೆ. ಚಂದ್ರಶೇಖರ ರಾವ್ 
ಕೆ. ಚಂದ್ರಶೇಖರ ರಾವ್    

ಹೈದರಾಬಾದ್: ಆಡಳಿತಾರೂಢ ಟಿಆರ್‌ಎಸ್ ಸರ್ಕಾರವನ್ನು ಉರುಳಿಸುವ ಸಲುವಾಗಿ ಬಿಜೆಪಿಯು ಟಿಆರ್‌ಎಸ್‌ನ ಸುಮಾರು 20ರಿಂದ 30 ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಭಾನುವಾರ ಆರೋಪಿಸಿದ್ದಾರೆ.

ಇಲ್ಲಿನ ಮನುಗುಡೆ ರಾವ್ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯ ನಿಮಿತ್ತ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಬಂದ ‘ದಲ್ಲಾಳಿಗಳು’ ಟಿಆರ್‌ಎಸ್‌ನ ಪ್ರತಿ ಶಾಸಕನಿಗೂ ₹ 100 ಕೋಟಿ ಹಣದ ಆಮಿಷ ಒಡ್ಡಿದ್ದಾರೆ. ಆದರೆ, ನಿಜವಾದ ಮಣ್ಣಿನ ಮಕ್ಕಳಾಗಿರುವ ಟಿಆರ್‌ಎಸ್ ಶಾಸಕರು ಇದನ್ನು ತಿರಸ್ಕರಿಸಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT