ADVERTISEMENT

ಬಾಂಬ್‌ ಬೆದರಿಕೆ: ಮೈಸೂರಿನಲ್ಲಿ ಬಂಧಿಸಿದ್ದ ವ್ಯಕ್ತಿ ಕುಲು ಪೊಲೀಸ್‌ ಕಸ್ಟಡಿಗೆ

ಹಿಮಾಚಲ ಪ್ರದೇಶ: ಬಾಂಬ್ ಬೆದರಿಕೆಯ ಇ ಮೇಲ್‌ ಪ್ರಕರಣ

ಪಿಟಿಐ
Published 30 ಸೆಪ್ಟೆಂಬರ್ 2025, 15:47 IST
Last Updated 30 ಸೆಪ್ಟೆಂಬರ್ 2025, 15:47 IST
<div class="paragraphs"><p>ಬಂಧನ </p></div>

ಬಂಧನ

   

ಶಿಮ್ಲಾ: ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಮೈಸೂರು ಪೊಲೀಸರು ಬಂಧಿಸಿದ್ದ ವ್ಯಕ್ತಿಯನ್ನು ಮಂಗಳವಾರ ಕುಲುವಿಗೆ ಕರೆತರಲಾಗಿದ್ದು, ವಿಚಾರಣೆಗಾಗಿ ಪೊಲೀಸರು ಐದು ದಿನ ವಶಕ್ಕೆ ಪಡೆದಿದ್ದಾರೆ.

ದೆಹಲಿಯ ನಿತಿನ್‌ ಶರ್ಮಾ ಬಂಧಿತ ಆರೋಪಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕುಲುವಿನ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಕಳೆದ ಮೇ 2ರಂದು ಜಿಲ್ಲಾಧಿಕಾರಿ ಕಚೇರಿಗೆ ಬೆದರಿಕೆಯ ಇ–ಮೇಲ್‌ ಬಂದಿತ್ತು.

ಕಳೆದ ಏ. 16ರಂದು ಹಿಮಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿ ಕಚೇರಿ ಹಾಗೂ ಮಂಡಿ ಜಿಲ್ಲಾಧಿಕಾರಿ ಕಚೇರಿ, ಏ. 25ರಂದು ಚಂಬಾ, ಹಮೀರ್‌ಪುರ ಜಿಲ್ಲಾಧಿಕಾರಿ ಕಚೇರಿಗಳಿಗೂ ಇದೇ ರೀತಿಯ ಬೆದರಿಕೆ ಬಂದಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರು ಮಂಗಳೂರು, ಬೆಂಗಳೂರಿನಲ್ಲಿ ಎರಡು ಮೊಬೈಲ್ ವಶಪಡಿಸಿಕೊಂಡಿದ್ದರು. ಈ ಮೊಬೈಲನ್ನು ಮಡಿಕೇರಿಯಲ್ಲಿ ಕಳವು ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ನಿತಿನ್‌ ಶರ್ಮಾನನ್ನು ಮೈಸೂರು ಪೊಲೀಸರು ಆಗಸ್ಟ್‌ನಲ್ಲಿ ಬಂಧಿಸಿದ್ದರು. ಇದೇ ರೀತಿಯ ಬೆದರಿಕೆ ಹಾಕಿದ್ದಕ್ಕಾಗಿ ತಮಿಳುನಾಡು, ಪುದುಚೇರಿ, ಹೈದರಾಬಾದ್‌ನಲ್ಲೂ ಈತನ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.