ADVERTISEMENT

ಮುಂಬೈ ಮಳೆ: ವಿಚಾರಣೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌

ಪಿಟಿಐ
Published 23 ಸೆಪ್ಟೆಂಬರ್ 2020, 7:07 IST
Last Updated 23 ಸೆಪ್ಟೆಂಬರ್ 2020, 7:07 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ಭಾರೀ ಮಳೆಯ ಕಾರಣಬಾಂಬೆ ಹೈಕೋರ್ಟ್‌ ವರ್ಚುವಲ್‌ ಸೇರಿದಂತೆ ತನ್ನ ಎಲ್ಲಾ ವಿಚಾರಣೆಗಳನ್ನು ಬುಧವಾರ ರದ್ದು ಮಾಡಿದೆ.

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ‍ಪ್ರಕರಣದ ಪ್ರಮುಖ ಆರೋಪಿಗಳಾದ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೌವಿಕ್‌ ಚಕ್ರವರ್ತಿ ಅವರ ಜಾಮೀನು ಅರ್ಜಿಯ ವಿಚಾರಣೆ ಬುಧವಾರ ನಿಗದಿಯಾಗಿತ್ತು.

ಅಲ್ಲದೇ ಕಂಗನಾ ರನೌತ್‌ ‌ಕಚೇರಿ ನೆಲಸಮ ಪ್ರಕರಣದ ವಿಚಾರಣೆಯೂ ಬುಧವಾರ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ವಿಚಾರಣೆಗಳನ್ನು ಮುಂದೂಡಲಾಗಿದ್ದು, ಪ್ರಕರಣ ಸಂಬಂಧಿತ ಪೀಠಗಳು ಗುರುವಾರ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಸೂಚನೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.