ADVERTISEMENT

ನನ್ನ ಹತ್ಯೆಗೆ ಬಿಎಸ್‌ಪಿಯಿಂದ ಬಹುಮಾನ ಘೋಷಣೆ: ಕಾಂಗ್ರೆಸ್‌ ನಾಯಕ ಉದಿತ್ ರಾಜ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2025, 5:55 IST
Last Updated 22 ಫೆಬ್ರುವರಿ 2025, 5:55 IST
   

ನವದೆಹಲಿ: ‘ನನ್ನ ಹತ್ಯೆ ಮಾಡುವವರಿಗೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಬಹುಮಾನ ಘೋಷಿಸಿದೆ’ ಎಂದು ಕಾಂಗ್ರೆಸ್‌ ನಾಯಕ ಉದಿತ್ ರಾಜ್‌ ಆರೋಪಿಸಿದ್ದಾರೆ.

‘ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಆಕಾಶ್ ಆನಂದ್ ಅವರ ಟ್ವೀಟ್‌ಗಳನ್ನು ನೀವು ಗಮನಿಸಿರಬಹುದು. ಅದರಲ್ಲಿ ಅವರು ಬೆದರಿಕೆಯ ಧ್ವನಿಯಲ್ಲಿ ಬರೆದಿದ್ದಾರೆ. ಅದಾದ ಬಳಿಕ ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಇಂತಹ ಸುಮಾರು 30 ಕರೆಗಳನ್ನು ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ’ ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.

‘ನನ್ನ ಹತ್ಯೆಗೆ ಬಹುಮಾನ ಘೋಷಿಸಲಾಗಿದೆ. ಈ ಬಗ್ಗೆ ಫೆಬ್ರುವರಿ 18ರಂದೇ ದೂರು ದಾಖಲಿಸಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದಿದ್ದಾರೆ.

ADVERTISEMENT

‘ಬಹುಜನ ಸಮಾಜಕ್ಕೆ ಮಾಯಾವತಿ ಮೋಸ ಮಾಡಿರುವುದು ನಿಜ. ನನ್ನ ಕಂಡರೆ ಮಾಯಾವತಿಗೆ ಭಯವಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.