ADVERTISEMENT

'ಎರಡೂ ಕಡೆ ಸಾವುನೋವು ಸಂಭವಿಸಿದೆ': ಭಾರತೀಯ ಸೇನೆ ಮತ್ತೊಂದು ಹೇಳಿಕೆ

ಏಜೆನ್ಸೀಸ್
Published 16 ಜೂನ್ 2020, 10:40 IST
Last Updated 16 ಜೂನ್ 2020, 10:40 IST
ಭಾರತೀಯ ಸೇನೆ (ಪ್ರಾತಿನಿಧಿಕ ಚಿತ್ರ)
ಭಾರತೀಯ ಸೇನೆ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಲಡಾಖ್‌ನ ಗಲ್ವಾನ್ ಕಣಿವೆಯಚೀನಾ ಗಡಿಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಎರಡೂ ದೇಶಗಳಲ್ಲಿ ಸಾವುನೋವು ಸಂಭವಿಸಿದೆ ಎಂದುಭಾರತೀಯ ಸೇನೆಯು ಸ್ಪಷ್ಟಪಡಿಸಿದೆ. ಈ ಮೊದಲು ಬಿಡುಗಡೆ ಮಾಡಿದ್ದ ಹೇಳಿಕೆಗೆ ತಿದ್ದುಪಡಿ ಮಾಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

'ಸೋಮವಾರ ಮಧ್ಯರಾತ್ರಿ ಸಂಘರ್ಷ ನಡೆಯಿತು. ನಮ್ಮ ಕಡೆಯ ಓರ್ವ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾದರು. ಎರಡೂ ಸೇನೆಗಳ ಹಿರಿಯ ಅಧಿಕಾರಿಗಳು ಉದ್ವಿಗ್ನತೆ ಶಮನಗೊಳಿಸುವ ಪ್ರಯತ್ನ ಆರಂಭಿಸಿದ್ದಾರೆ' ಎಂದು ಸೇನೆ ಹೇಳಿದೆ.

1975ರ ನಂತರ ಇದೇ ಮೊದಲ ಬಾರಿಗೆ ಚೀನಾ ಗಡಿಯಲ್ಲಿ ಸಾವು ಸಂಭವಿಸುವಷ್ಟು ತೀವ್ರವಾದ ಘರ್ಷಣೆ ನಡೆದಿದೆ. ಉದ್ವಿಗ್ನತೆ ಶಮನಗೊಳಿಸಲೆಂದು ಪೂರ್ವ ಲಡಾಖ್‌ನಲ್ಲಿ ಎರಡೂ ದೇಶಗಳ ಹಿರಿಯ ಸೇನಾಧಿಕಾರಿಗಳು ಮಾತುಕತೆ ನಡೆಸುತ್ತಿದ್ದರು.

ADVERTISEMENT

ಕಳೆದ ಹಲವು ವಾರಗಳಿಂದಮುಖಾಮುಖಿಯಾಗಿ ನಿಂತಿದ್ದ ಹಲವು ಪ್ರದೇಶಗಳಿಂದ ಎರಡೂ ಸೇನೆಗಳು ಹಿಂದೆ ಸರಿಯುತ್ತಿದ್ದವು. ಈ ನಡುವೆಯೇ ಸಾವುನೋವು ಸಂಭವಿಸಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಜೂನ್ 6ರಂದು ಎರಡೂ ಸೇನೆಗಳ ಉನ್ನತ ಅಧಿಕಾರಿಗಳ ಮಾತುಕತೆಯ ನಂತರ ಚೀನಾ ಯೋಧರ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅವರು ತುಸು ಮೃದುವಾದಂತೆ ಭಾಸವಾಗಿತ್ತು. ಸೈನಿಕರು ಮತ್ತು ಯುದ್ಧೋಪಕರಣಗಳನ್ನು ನಿಯೋಜಿಸುವ ಕಾರ್ಯಾಚಾರಣೆಯು ವೇಗ ಕಳೆದುಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.