ADVERTISEMENT

ವಂಚನೆ: ವೈಎಸ್‌ಆರ್‌ಸಿಪಿ ಸಂಸದ ವಿರುದ್ಧ ಪ್ರಕರಣ

ಪಿಟಿಐ
Published 9 ಅಕ್ಟೋಬರ್ 2020, 6:31 IST
Last Updated 9 ಅಕ್ಟೋಬರ್ 2020, 6:31 IST
ಸಿಬಿಐ ಲಾಂಛನ
ಸಿಬಿಐ ಲಾಂಛನ   

ನವದೆಹಲಿ: ಸಾಲ ನೀಡಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನೇತೃತ್ವದ ಬ್ಯಾಂಕುಗಳ ಕೂಟಕ್ಕೆ ₹ 826 ಕೋಟಿ ವಂಚಿಸಿದ ಆರೋಪದ ಮೇಲೆ ವೈ.ಎಸ್‌.ಆರ್‌.ಕಾಂಗ್ರೆಸ್‌ ಪಾರ್ಟಿಯ ಸಂಸದ ಕನಮುರು ರಘುರಾಮಕೃಷ್ಣ ರಾಜು, ಪತ್ನಿ ಹಾಗೂ ಇತರ ಒಂಬತ್ತು ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ರಾಜು ಒಡೆತನದ ಇಂಡ್‌–ಭಾರತ್ ಥರ್ಮಲ್‌ ಪವರ್‌ ಲಿ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ 300 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ಸಾಲ ಪಡೆದಿತ್ತು ಎಂದು ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT